ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್‌ ಕುರಿತು ಓದಲೇಬೇಕಾದ 10 ಸುದ್ದಿಗಳು

Last Updated 2 ಜುಲೈ 2019, 7:04 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ 2019–20ನೇ ಸಾಲಿನ ಬಜೆಟ್‌ ಕುರಿತು ಓದಲೇಬೇಕಾದ 10 ಸುದ್ದಿಗಳು ಇವು...

ಕುಮಾರಸ್ವಾಮಿ ಬಜೆಟ್‌ ಅಧಿವೇಶನದಲೊಂದು ‘ಸಾಹಿತ್ಯ ಗೋಷ್ಠಿ’

ಲಾಭ, ನಷ್ಟ, ಗಳಿಕೆ, ಉಳಿಕೆಯ ಲೆಕ್ಕಾಚಾರದಿಂದಲೇ ತುಂಬಿರುವ ಬಜೆಟ್‌ ಭಾಷಣವನ್ನು ಕೊಂಚ ಆಸಕ್ತಿದಾಯಕವನ್ನಾಗಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಒಂದಷ್ಟು ಸಾಹಿತ್ಯದ ಸ್ಪರ್ಶ ನೀಡಿದ್ದು, ಅಲ್ಲೊಂದು ಪುಟ್ಟ ಸಾಹಿತ್ಯ ಗೋಷ್ಠಿಯೇ ನಡೆದಿದೆ. ‌

https://bit.ly/2UODXgx

***
ಕುಮಾರಸ್ವಾಮಿ ಬಜೆಟ್‌ಗೆ ಇವರು ಹೀಗೆ ಪ್ರತಿಕ್ರಿಯಿಸಿದರು...

ಸಕ್ತ ಸಾಲಿನ ಬಜೆಟ್‌ ಕುರಿತಂತೆ ಆಡಳಿತ ಪಕ್ಷಗಳು ಪರಿಪೂರ್ಣ ಬಜೆಟ್‌ ಎಂದು ಬಣ್ಣಿಸಿದರೆ, ವಿರೋಧ ಪಕ್ಷ ಇದು ಶೂನ್ಯ ಬಜೆಟ್‌ ಎಂದು ಹೇಳಿದೆ.

https://bit.ly/2tdQNJw

***
ಮಹಿಳೆಯರು, ಅಂಗವಿಕಲರು, ಸಮಾಜ ಕಲ್ಯಾಣಕ್ಕೆ ಕುಮಾರಸ್ವಾಮಿ ಕೊಟ್ಟ ಅನುದಾನ ಎಷ್ಟು?

ಮಾತೃಶ್ರೀ ಯೋಜನೆ ಅಡಿಯಲ್ಲಿ ನೀಡುತ್ತಿದ್ದ ₹ 1000 ಸಹಾಯಧನವನ್ನು ₹ 2000ಕ್ಕೆ ಏರಿಕೆ ಮಾಡಲಾಗಿದ್ದು ಮಹಿಳೆಯರು, ಅಂಗವಿಕಲರು ಮತ್ತು ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.

https://bit.ly/2tbibaT

***
ಈ ಬಾರಿಯದ್ದು ₹3415 ಕೋಟಿ ಖೋತಾ ಬಜೆಟ್

ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಬಜೆಟ್‌ನ ಗಾತ್ರ 2.34 ಲಕ್ಷ ಕೋಟಿ (₹2,34,153 ಕೋಟಿ). ಈ ಬಾರಿಯ ಬಜೆಟ್‌ ದಾಖಲೆಗಳ ಪ್ರಕಾರ ಆದಾಯ ₹2,30,738 ಕೋಟಿ, ವೆಚ್ಚ ₹2,34,153 ಕೋಟಿ. ಆದಾಯಕ್ಕಿಂತಲೂ ಖರ್ಚು ₹3415 ಕೋಟಿ ಹೆಚ್ಚಾಗಿದೆ. ಹಾಗಾಗಿ ಇದು ಖೋತಾ ಬಜೆಟ್.

https://bit.ly/2TDJKWf

***
ರಾಜ್ಯ ಬಜೆಟ್‌ 2019–20: ಯಾವುದಕ್ಕೆ ಎಷ್ಟು? ಇಲ್ಲಿದೆ ಗ್ರಾಫ್‌

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಎರಡನೇ ಬಜೆಟ್‌ನ್ನು ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದರು. ಮೂರು ಗಂಟೆಗೂ ಹೆಚ್ಚು ಕಾಲ ಬಜೆಟ್‌ ಭಾಷಣ ಮಾಡಿದ್ದು, ಕೃಷಿ ಮತ್ತು ತೋಟಗಾರಿಕೆಗೆ ಶೇ 3ರಷ್ಟು ಅನುದಾನ ಘೋಷಿಸಿದ್ದಾರೆ.

https://bit.ly/2DmAY7M

***
ಬಿಯರ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಬಿಯರ್‌ ಹಾಗೂ ಆಲ್ಕೊಹಾಲ್ ಪ್ರಮಾಣ ಕಡಿಮೆ ಇರುವ ಪೇಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದರು.

https://bit.ly/2tglCwZ

***
ಕೆರೆಗಳ ಸುಧಾರಣೆಗೆ ಆದ್ಯತೆ, ನೀರಾವರಿ ಯೋಜನೆಗಳಿಗೆ ₹17 ಸಾವಿರ ಕೋಟಿ

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೀರಾವರಿಗೆ ₹17 ಸಾವಿರ ಕೋಟಿ ಅನುದಾನ ನೀಡಲಾಗಿದೆ. ರಾಜ್ಯದಾದ್ಯಂತ ಕೆರೆಗಳನ್ನು ತುಂಬಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ತಿಳಿಸಿದ್ದಾರೆ.

https://bit.ly/2GgOb68

***
ಇ– ಆಡಳಿತ: ಫಲಾನುಭವಿಗಳಿಗೆ ಆಧಾರ್ ಆಧಾರಿತ ’ನೇರ ನಗದು ವರ್ಗಾವಣೆ’

ಇ–ಆಡಳಿತ ವ್ಯವಸ್ಥೆಯ ಭಾಗವಾಗಿ ಸರ್ಕಾರ ಎಲ್ಲ ಇಲಾಖೆಗಳ ಫಲಾನುಭವಿಗಳಿಗೆ ಆಧಾರ್ ಆಧಾರಿತ ‘ನೇರ ನಗದು ವರ್ಗಾವಣೆ’ಗೆ ಕ್ರಮಕೈಗೊಳ್ಳಲಾಗುತ್ತಿದೆ.

https://bit.ly/2ROrjMz

***

ಆನ್‌ಲೈನ್ ಸಿಇಟಿ ಪರೀಕ್ಷೆ, ಹೋಬಳಿಗೊಂದು ಪಬ್ಲಿಕ್ ಸ್ಕೂಲ್ ಸ್ಥಾಪನೆಯ ಘೋಷಣೆ

ಸಿಇಟಿ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸುವ ಮತ್ತು ಆಧಾರ್ ಆಧರಿತ ಡಿಜಿಟಲ್ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳ ಆನ್‌ಲೈನ್ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರದ ಬಜೆಟ್‌ ಭಾಷಣದಲ್ಲಿ ಹೇಳಿದರು.

https://bit.ly/2tb6uB0

***
ರಾಜ್ಯ ಬಜೆಟ್‌: ಬೆಂಗಳೂರಿನ ಪಾಲಿಗೆ ಏನೇನು?

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ರಾಜ್ಯ ಬಜೆಟ್‌ ಅನ್ನು ಮಂಡಿಸಿದ್ದು, ರಾಜ್ಯಧಾನಿ ಬೆಂಗಳೂರಿಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

https://bit.ly/2Brcudo

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT