‘ನಾವು ತಾಂಡಾಕ್ಕೆ ಬಂದು ವಾರ ಕಳೆಯಿತು. ಈಗ ಹೇಗೆ ನಮಗೆ ಸೊಂಕು ತಗುಲುತ್ತದೆ? ನಮ್ಮ ಹೆಸರೆಲ್ಲಿದೆ?’ ಎಂದು ಸೋಂಕಿತರುತಗಾದೆ ತೆಗೆದರು. ಅಧಿಕಾರಿಗಳು ಮನವೊಲಿಸಿ 9 ಜನರನ್ನು ಕರೆತಂದರು. ನಂತರ ಬಂದ ಮತ್ತೊಬ್ಬ ಸೋಂಕಿತ, ‘ನನ್ನ ಹೆಸರೆಲ್ಲಿದೆ ತೋರಿಸಿ, ಸುಮ್ಮನೆ ನನ್ನನ್ನು ಕರೆದೊಯ್ಯುತ್ತಿದ್ದೀರಿ’ ಎಂದು ಗದರಿಸುತ್ತ ಸಿಬ್ಬಂದಿ ಬಳಿಗೆ ತೆರಳುತ್ತಿದ್ದಾಗ ಆತನನ್ನು ತಡೆಯಲು ಪೊಲೀಸರು ಲಾಠಿ ಬೀಸಿದ್ದಾರೆ. ಇಷ್ಟಾಗುತ್ತಿದ್ದಂತೆ ತಾಂಡಾದ ಕೆಲವರು, ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಕಲ್ಲು ತೂರಲು ಆರಂಭಿಸಿದರು. ಸಿಬ್ಬಂದಿ ಅಲ್ಲಿಂದ ಓಡಿ ಹೋಗಿ ಬಚಾವಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿದ್ದ ಅಂಬುಲೆನ್ಸ್, ವೈದ್ಯಾಧಿಕಾರಿ ವಾಹನ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿ ಗಾಜು ಪುಡಿ ಮಾಡಿದರು ಎಂದು ಮೂಲಗಳು ತಿಳಿಸಿವೆ.