ಕಾರ್ಖಾನೆ ಮಾಲೀಕ ಬಬಲರಾವ್ ಸಿಂಧೆ, ಅವರ ಪುತ್ರ, ವ್ಯವಸ್ಥಾಪಕ ನಿರ್ದೇಶಕ ರಂಜಿತ್ ಸಿಂಧೆ, ಅವರ ಪತ್ನಿ ಪ್ರಣತಿ ಸಿಂಧೆ ಹಾಗೂ ಇನ್ನೊಬ್ಬ ನಿರ್ದೇಶಕ ವೀರಣ್ಣ ಸಿದ್ದರಾಯ ಪತ್ತಾರ ಅವರು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, 2017ರಲ್ಲಿ ಮಹಾರಾಷ್ಟ್ರದ ಯಳನಿಂಬರಗಿ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಸಾಲ ಪಡೆದಿದ್ದಾರೆ. ಇವರು ಸಾಲ ಮರು ಪಾವತಿಸದೇ ಇರುವುದರಿಂದ ಬ್ಯಾಂಕ್, ರೈತರಿಗೆ ನೋಟಿಸ್ ಕೊಟ್ಟಿದ್ದು, ಇದನ್ನು ನೋಡಿ ರೈತರು ಆಘಾತಕ್ಕೆ ಒಳಗಾಗಿದ್ದಾರೆ.