ಬೆಂಗಳೂರು: ಕೊರೊನಾ ಸೋಂಕು ತಬ್ಲೀಗ್ ಸದಸ್ಯರಿಂದ ಹರಡುತ್ತಿದೆ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ತಬ್ಲೀಗ್ ಸಮಾವೇಶ ನಡೆಸಲು ಅವಕಾಶ ಕೊಟ್ಟವರು ಯಾರು ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಮೆರಿಕ, ಇಟಲಿಯಂತಹ ದೇಶಗಳಲ್ಲಿ ತಬ್ಲೀಗ್ ಸದಸ್ಯರಿದ್ದಾರೆಯೇ? ಅಲ್ಲಿ ಏಕೆ ಸೋಂಕು ಹರಡಿದೆ? ತಬ್ಲೀಗ್ ಸದಸ್ಯರ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ' ಎಂದು ಆರೋಪಿಸಿದರು.
ಸರ್ಕಾರ ಕೊರೊನಾ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ವ ಪಕ್ಷ ಸಭೆ ನಡೆಸಬೇಕು ಎಂದು ಒತ್ತಾಯಿಸಿದ ಮೇಲೆ ನಮ್ಮನ್ನು ಕರೆಸಿದರು. ನಾವು ಕಾರ್ಮಿಕರ ಬಸ್ ಟಿಕೆಟ್ ದರ ಕೊಡ್ತೇವೆ ಎಂದ ಮೇಲೆ ಸರ್ಕಾರ ಉಚಿತವಾಗಿ ಕಾರ್ಮಿಕರನ್ನು ಕರೆದೊಯ್ದಿದೆ. ಅಸಂಘಟಿತ ಕುಲಕಸುಬುದಾರರಿಗೆ ನೆರವು ನೀಡಲು ಸಹ ನಾವು ಹಾಕಿದ ಒತ್ತಡವೇ ಕಾರಣ ಎಂದರು.