ಸಿರಿಗೆರೆ: ವಿಶ್ವಸಂಸ್ಥೆಯ ಸಹವರ್ತಿ ಸಂಸ್ಥೆಯಾದ ಅಂತರರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಹ್ವಾನದ ಮೇರೆಗೆ ಕೊರಿಯಾ ರಾಜಧಾನಿ ಸೋಲ್ನಲ್ಲಿ ಫೆ. 7ರಿಂದ 11ರವರೆಗೆ ನಡೆಯಲಿರುವ ‘ವಿಶ್ವ ಶೃಂಗ ಶಾಂತಿ’ ಸಮ್ಮೇಳನದಲ್ಲಿ ಭಾಗವಹಿಸಲು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬುಧವಾರ ಸಿರಿಗೆರೆಯಿಂದ ತೆರಳಿದರು.
‘ಅಂತರರಾಷ್ಟ್ರೀಯ ಶಾಂತಿ ಸುಭದ್ರತೆ ಮತ್ತು ಮಾನವ ಅಭಿವೃದ್ಧಿ’ ಕುರಿತು ಅವರು ವಿಷಯ ಮಂಡಿಸುವರು. ವಿವಿಧ ದೇಶಗಳ ಪ್ರಮುಖರು, ಸಂಸದೀಯ ಪಟುಗಳು, ಧಾರ್ಮಿಕ ನಾಯಕರು ಪಾಲ್ಗೊಳ್ಳುವರು.