ಸೋಮವಾರವಂತೂ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಜೋರು ಎನಿಸುವಂಥ ಮಳೆಯೇ ಆಗಿದೆ. ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಸೇರಿದಂತೆ ಹಲವೆಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಯಿತು. ಹೀಗಾಗಿ ಬೇಸಿಗೆಯಲ್ಲಿ ತೀವ್ರ ತಪಮಾನ ಎದುರಿಸುವ ಕರಾವಳಿ ಜಿಲ್ಲೆಗಳು ಮತ್ತು ಸದಾ ಬೇಸಿಗೆಯಂಥ ಪರಿಸರ ಹೊಂದಿರುವ ಉತ್ತರ ಕರ್ನಾಟಕ ಭಾಗದಲ್ಲಿ ವಾತಾವರಣ ತಕ್ಕಮಟ್ಟಿಗೆ ತಂಪಾಗಿದೆ.