ಟಿಪ್ಪು ಜಯಂತಿ ಆಚರಣೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು ಬಾಡಿಗೆ ಕೊಡಲು ನಿರಾಕರಿಸಿದ್ದನ್ನು ಖಂಡಿಸಿ, ಪ್ರತಿಭಟನಕಾರರು ಜಯಂತಿ ಆಚರಣೆಗೆ ಮುಂದಾದರು. ಕಚೇರಿ ಮುಂಭಾಗದಲ್ಲೇ ಟಿಪ್ಪು ಭಾವಚಿತ್ರವಿಟ್ಟು, ಎರಡೂ ಬದಿಯಲ್ಲಿ ಕನ್ನಡ ಬಾವುಟಗಳನ್ನು ಕಟ್ಟಿ, ಹೂವಿನ ಹಾರ ಹಾಕಿ, ಗುಲಾಬಿ ಹೂವಿನ ದಳಗಳಿಂದ ಅರ್ಚನೆ ಮಾಡಲಾಯಿತು.