ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಕಚೇರಿಯಲ್ಲಿದ್ದ ನಿವೃತ್ತ ಅಧಿಕಾರಿಗಳಿಗೆ ಗೇಟ್‌ಪಾಸ್‌

Last Updated 30 ಜುಲೈ 2019, 19:02 IST
ಅಕ್ಷರ ಗಾತ್ರ

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ಮುಖ್ಯಮಂತ್ರಿ ಹಾಗೂ ಇತರ ಸಚಿವರ ಕಚೇರಿಗಳಲ್ಲಿ ನಿವೃತ್ತಿಯ ನಂತರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ 14 ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ನಂತರ ಈ ಆದೇಶ ಹೊರಡಿಸಲಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ಎಸ್.ಸುಬ್ರಹ್ಮಣ್ಯ, ಬಿ.ಎನ್.ಕೃಷ್ಣಯ್ಯ, ಕೆ.ವಿಶ್ವನಾಥರೆಡ್ಡಿ, ಇತರ ಅಧಿಕಾರಿಗಳಾದ ಎಂ.ನಾರಾಯಣಪ್ಪ, ಕೆ.ಆರ್.ಶಿವಕುಮಾರ್, ಎಲ್.ಚನ್ನಕೇಶವಮೂರ್ತಿ, ಎಂ.ಜಿ.ಗೂಳಿಗೌಡ, ಎಂ.ಸಿ.ನಾಗರಾಜ್, ಕೆ.ಎನ್.ನಿಂಗೇಗೌಡ, ಕೆ.ಶಾಮಣ್ಣ, ಟಿ.ಎನ್.ರವಿಪ್ರಕಾಶ್, ಡಾ.ಎ.ಬಿ.ಪಾಟೀಲ, ಎಂ.ಜಿ.ಶಿವಲಿಂಗಯ್ಯ, ಬಿ.ಎಸ್.ಶ್ರೀಧರ್ ಕರ್ತವ್ಯದಿಂದ ಬಿಡುಗಡೆಗೊಂಡ ಅಧಿಕಾರಿಗಳು.

ಮಾತೃ ಇಲಾಖೆಗೆ: ಮುಖ್ಯಮಂತ್ರಿ ಕಚೇರಿ ಹಾಗೂ ಸಚಿವರ ಆಪ್ತ ಶಾಖೆಗಳಲ್ಲಿ ಇದ್ದ 23 ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT