ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ಎಸ್.ಯಡಿಯೂರಪ್ಪ ವಿರುದ್ಧ ಟ್ವೀಟ್ಗಳ ಸಮರ ಸಾರಿದ್ದಾರೆ.
‘ಸಿದ್ದರಾಮಯ್ಯ ಅನ್ಯಾಯವಾಗಿ ನನ್ನನ್ನು ನಾಲ್ಕು ವರ್ಷ ಜೈಲಿಗೆ ತಳ್ಳಿದರು’ ಎಂಬುದಾಗಿ ಜರ್ನಾದನ ರೆಡ್ಡಿ ನೀಡಿರುವ ಹೇಳಿಕೆಗೆ ಮಂಗಳವಾರ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ– ವಿರುದ್ಧ ಚರ್ಚೆ ಆರಂಭಗೊಂಡಿದೆ.
ಸಿದ್ದರಾಮಯ್ಯ ಟ್ವೀಟ್ಗಳು ಹೀಗಿವೆ:
*ಸಿದ್ದರಾಮಯ್ಯ ಅನ್ಯಾಯವಾಗಿ ನನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿದರು ಎಂದು ಕಣ್ಣೀರು ಹಾಕುತ್ತಿರುವ ಜನಾರ್ದನ ರೆಡ್ಡಿಯವರೇ ನಿಮ್ಮ ಪಕ್ಷದ ಸಂಸದರೇ(ಪ್ರತಾಪಸಿಂಹ) ಬರೆದಿರುವ ಈ ಪುಸ್ತಕ ಓದಿ, ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂಬುದು ಗೊತ್ತಾಗುತ್ತದೆ.
ಜನಾರ್ಧನ ರೆಡ್ಡಿಯವರೇ, ನಿಮ್ಮ ಜತೆಗಿನ ಚರ್ಚೆಯಲ್ಲಿ ನಾನು ಕೇಳಬೇಕೆಂದಿದ್ದ ಪ್ರಶ್ನೆಗಳನ್ನು ನಿಮ್ಮ @BJP4Karnataka ಸಂಸದರೇ @mepratap ಕೇಳಿಬಿಟ್ಟಿದ್ದಾರೆ. ಚರ್ಚೆಗೆ ಬರುವ ಮೊದಲು ಅವರ ಪುಸ್ತಕವನ್ನೂ ಓದ್ಕೊಂಡು ಬನ್ನಿ.@INCKarnataka pic.twitter.com/NkCksSx8Fq
— Siddaramaiah (@siddaramaiah) October 30, 2018
*ಜನಾರ್ದನ ರೆಡ್ಡಿಯವರೇ ನಿಮ್ಮ ಚರ್ಚೆಯಲ್ಲಿ ನಾನು ಕೇಳಬೇಕೆಂದಿದ್ದ ಪ್ರಶ್ನೆಗಳನ್ನು ನಿಮ್ಮ ಸಂಸದರೇ ಕೇಳಿದ್ದಾರೆ. ಚರ್ಚೆಗೆ ಬರುವುದಕ್ಕೆ ಮೊದಲು ಅವರ ಪುಸ್ತಕ ಓದಿಕೊಂಡಿ ಬನ್ನಿ.
*ಶಿವಮೊಗ್ಗ ಹೋರಾಟದ ನೆಲ, ಇಲ್ಲಿನ ಮಣ್ಣಿನಲ್ಲಿ, ಇಲ್ಲಿನ ಜನರ ರಕ್ತದಲ್ಲಿ ಅಂತಹ ಹೋರಾಟದ ಕಿಚ್ಚು ಇದೆ. ಇದು ಒಂದು ಲೋಕಸಭಾ ಕ್ಷೇತ್ರದ ಚುನಾವಣೆ ಎಂದು ತಿಳಿದುಕೊಳ್ಳಬೇಡಿ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯುವ ಹೋರಾಟ ಶಿವಮೊಗ್ಗದ ನೆಲದಿಂದ ಆರಂಭಗೊಳ್ಳಲಿ.
ಶಿವಮೊಗ್ಗ ಹೋರಾಟದ ನೆಲ, ಇಲ್ಲಿನ ಮಣ್ಣಿನಲ್ಲಿ, ಇಲ್ಲಿನ ಜನರ ರಕ್ತದಲ್ಲಿ ಅಂತಹ ಹೋರಾಟದ ಕೆಚ್ಚು ಇದೆ. ಇದು ಕೇವಲ ಒಂದು ಲೋಕಸಭಾ ಕ್ಷೇತ್ರದ ಚುನಾವಣೆ ಎಂದು ತಿಳಿದುಕೊಳ್ಳಬೇಡಿ.
— Siddaramaiah (@siddaramaiah) October 30, 2018
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯುವ ಹೋರಾಟ ಶಿವಮೊಗ್ಗದ ನೆಲದಿಂದಲೇ ಪ್ರಾರಂಭಗೊಳ್ಳಲಿ.@INCKarnataka
ಸಿ.ಟಿ.ರವಿ ತಿರುಗೇಟು:ಸಿದ್ದರಾಮಯ್ಯ ಅವರಿಗೆ ಶಾಸಕ ಸಿ.ಟಿ.ರವಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
*ಜನಾರ್ದನ ರೆಡ್ಡಿ ಬಗ್ಗೆ ಏಕೆ ಮಾತನಾಡುತ್ತೀರಿ ಸಿದ್ದರಾಮಯ್ಯ ಅವರೇ. ಚಾಮುಂಡೇಶ್ವರಿ ಕ್ಷೇತ್ರದ ಸಜ್ಜನ ಮತದಾರರು ಅಹಂಕಾರಿ ಮತ್ತು ಹಿಂದೂ ವಿರೋಧಿ ಮುಖ್ಯಮಂತ್ರಿಯನ್ನು ಸೋಲಿಸಿದ ಬಗ್ಗೆ ಯಾಕೆ ಮಾತನಾಡುವುದಿಲ್ಲ. ರಾಜಕಾರಣದಲ್ಲಿ ಉಳಿದುಕೊಳ್ಳಲು ನೀವು ನಿರ್ಲಜ್ಜೆಯಿಂದ ತಂದೆ–ಮಗನಿಗೆ ಸ್ವಾಭಿಮಾನ ಒತ್ತೆ ಇಟ್ಟ ಬಗ್ಗೆ ಏಕೆ
ಮಾತನಾಡುವುದಿಲ್ಲ?
Why talk abt Janardhana Reddy @siddaramaiah Avare?
— C.T.Ravi (@CTRavi_BJP) October 30, 2018
Why don't you speak about how the wise people of Chamundeshwari decimated an arrogant & Anti-Hindu Chief Minister like you?
Why don't you say how shamelessly you sold your pride to Father-Son duo to remain relevant in Politics? https://t.co/uSYYR4Oo6H
ಅಪ್ಪ ಅಮ್ಮನ ಜಗಳ ಉಂಡು ಮಲಗೋ ತನಕ . . .
— C.T.Ravi (@CTRavi_BJP) October 30, 2018
ಸಿದ್ದರಾಮಯ್ಯ ಮತ್ತು ದೇವೇಗೌಡರ ದೋಸ್ತಿ ಅಧಿಕಾರ ಇರೋ ತನಕ ! ! ! pic.twitter.com/MWLH8RyhL4
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.