ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಬಣಕಾರ, ‘ಮಂಗಳವಾರ ಯಡಿಯೂರಪ್ಪ ಸಭೆಕರೆದಿದ್ದರು. ಪಾಟೀಲರು ಅಭ್ಯರ್ಥಿಯಾದರೆ ಅವರನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅವರ ಮಾತಿಗೆ ಬೆಲೆ ಕೊಡಲು ಸಿದ್ಧನಿದ್ದೇನೆ. ಆದರೆ, ‘ನಮ್ಮನ್ನು ಕೊಲ್ಲಲು ನಿರ್ಧರಿಸಿದ್ದೀರಾ? ಹೊಟ್ಟೆಗೆ ವಿಷ ಹಾಕಿ ಹೋಗ್ತೀರಾ’ ಎಂದು ಇಲ್ಲಿನ ಮತದಾರರು ಕೇಳುತ್ತಿದ್ದಾರೆ. ಏನೆಂದು ಉತ್ತರಿಸಲಿ’ ಎಂದರು.