‘ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಅಭಿನಯಿಸಿದ್ದರಿಂದ ಕಲಾಭಿಮಾನಿಗಳ ಮನದಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದಿದೆ. ‘ಭೂತಯ್ಯನ ಮಗ ಅಯ್ಯು’ಚಿತ್ರದ ಪ್ರಚಾರಕ್ಕೆ ಮಂಡ್ಯಕ್ಕೆ ತೆರಳಿದ ಸಂದರ್ಭದಲ್ಲಿ ಸಿದ್ದಲಿಂಗಯ್ಯ, ವಿಷ್ಣುವರ್ಧನ್, ಎಂ. ಪಿ. ಶಂಕರ್ ನನ್ನ ಜತೆ ವೇದಿಕೆಯಲ್ಲಿದ್ದರು. ಆಗ ಮಹಿಳೆಯೊಬ್ಬರು ವೇದಿಕೆ ಸನಿಹ ಬಂದು ಜಾಡಿ ಉಪ್ಪಿನಕಾಯಿ ಕೊಟ್ಟು, ‘ಎಷ್ಟು ಬೇಕಾದರೂ ತಿನ್ನು. ಆದರೆ ಕದಿಯಬೇಡ’ಎಂದು ಬುದ್ಧಿ ಹೇಳಿದ್ದರು.