ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಸೋಮಣ್ಣ, ‘ಕೋವಿಡ್–19ರಿಂದಾಗಿಜನರ ಬದುಕು ಏರುಪೇರಾಗಿದೆ. ಬಡವರು ಕಟ್ಟಿಕೊಂಡಿರುವ ಮನೆಗಳಿಗೆಹಣ ಬಿಡುಗಡೆಯಾಗದಿರುವ ನೋವು ನನಗೂ ಅರ್ಥವಾಗಿದೆ.ಇಂದು ಸಾಕಷ್ಟು ಜನರ ಪ್ರಶ್ನೆಗಳಿಗೆ ಉತ್ತರಿಸುವ, ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹರಿಸುವ ಕೆಲಸ ಮಾಡಿದೆ.ಮತ್ತೊಮ್ಮೆ ಇಲ್ಲಿಗೆ ಬರ್ತೀನಿ. ಜನರ ಜೊತೆಗೆ ಮಾತನಾಡುತ್ತೇನೆ’ ಎಂದರು.