ನರೇಂದ್ರ ಮೋದಿಯವರು ಲೋಕಸಭೆ ಚುನಾವಣೆಗೆ ಮುನ್ನ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಪಕ್ಷಕ್ಕೆ ಬಹುಮತ ಬಂದ ನಂತರವೂ ಮೈತ್ರಿ ಧರ್ಮ ಪಾಲಿಸಿದರು. ಕಾಂಗ್ರೆಸ್ ಮೈತ್ರಿ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಅದರ ತಲೆ ತಿರುಗಿದೆ ಎಂದು ಆರೋಪಿಸಿದರು.