ಮಹದಾಯಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್ ನಲ್ಲಿ ಪ್ರಕಟಿಸಿದ ತಕ್ಷಣ ಕಾಮಗಾರಿಯನ್ನು ಆರಂಭಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಕೇಂದ್ರ ಸರ್ಕಾರ ಗೆಜೆಟ್ ನೋಟಿಪಿಕೇಶನ್ ಮಾಡದೇ ನಿರಾಸೆ ಮಾಡಿತು. ಹೀಗಾಗಿ ನಾವು ಅಫೀಲ್ ಹೋಗಿದ್ದೇವೆ. ಅಂತಿಮ ತೀರ್ಪು ಬಂದು, ಗೆಜೆಟ್ ನೋಟಿಪಿಕೇಶನ್ ಆದ ಬಳಿಕ ಯೋಜನೆ ಅನುಷ್ಠಾನಕ್ಕೆ ಬದ್ಧರಿದ್ದೇವೆ ಎಂದು ಹೇಳಿದರು.