‘ರಹವಾಸಿ ಪ್ರಮಾಣಪತ್ರವನ್ನು ವಿತರಿಸಲು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಯಾವುದೇ ಅಧಿಕಾರ ಇರುವುದಿಲ್ಲ, ಕಂದಾಯ ಇಲಾಖೆಯ ಅಧಿಕಾರಿಗಳು ವಿತರಿಸಬೇಕು. ಚನ್ನರಾಜ ಅವರಿಗೆ ಕಾನೂನು ಬಾಹಿರವಾಗಿ ಪಂಚಾಯ್ತಿಯ ಸದಸ್ಯರೊಬ್ಬರು ನೀಡಿದ್ದಾರೆ ಎನ್ನುವ ದೂರು ಬಂದಿತ್ತು. ಇದರ ಅನ್ವಯ ರಹವಾಸಿ ಪ್ರಮಾಣಪತ್ರವನ್ನು ಪರಿಶೀಲಿಸಿ, ಕಾನೂನು ಬಾಹಿರವಾಗಿದ್ದರೆ ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಪಿಡಿಒ ಅವರಿಗೆ ಆದೇಶಿಸಿದ್ದೇನೆ’ ಎಂದು ಸಿಇಒ ಡಾ.ರಾಜೇಂದ್ರ ಕೆ.ವಿ ತಿಳಿಸಿದರು.