ನವದೆಹಲಿ:ಭಯೋತ್ಪಾದಕ ಗುಂಪುಗಳು ಕೋವಿಡ್ ಪಿಡುಗಿನ ಈ ಸಂದರ್ಭವನ್ನು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಮತ್ತು ಹಣ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿವೆ. ನಿರ್ಬಂಧಗಳ ಈ ಸಮಯದಲ್ಲಿ ಸುದ್ದಿಯಿಂದ ದೂರವೇ ಇರುವ ಉಗ್ರಗಾಮಿ ಸಂಘಟನೆ
ಗಳಿಗೆ ಪ್ರಸ್ತುತತೆ ಕಳೆದುಕೊಳ್ಳುವ ಆತಂಕವೂ ಇದೆ. ಹಾಗಾಗಿ, ನಿರ್ಬಂಧಗಳು ಸಡಿಲಿಕೆಯಾದ ಬಳಿಕ ದಾಳಿ ನಡೆಸುವ ಅಪಾಯ ಇದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ಹೇಳಿದೆ.