<p><strong>ಪೆಕೆಂಟ್(ಮ್ಯಾನ್ಮಾರ್):</strong> ದೇಶದ ಉತ್ತರ ಭಾಗದ ಪಚ್ಚೆ ಹರಳಿನ ಗಣಿಯಲ್ಲಿ ಗುರುವಾರ ಸಂಭವಿಸಿದ ಭೂಕುಸಿತ ದುರಂತಕ್ಕೆ ಮ್ಯಾನ್ಮಾರ್ ನಾಯಕಿ ಅಂಗ್ಸಾನ್ ಸೂಕಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 166 ಜನರ ದಾರುಣ ಸಾವಿಗೆ ಕಾರಣವಾದ ಈ ದುರ್ಘಟನೆಗೆ ನಿರುದ್ಯೋಗ ಸಮಸ್ಯೆ ಕಾರಣ ಎಂದು ಅವರು ದೂರಿದ್ದಾರೆ.</p>.<p>ನಿರ್ಮಾಣ ಉದ್ಯಮದ ಪ್ರತಿನಿಧಿಗಳ ಜೊತೆ ಶುಕ್ರವಾರ ಫೇಸ್ಬುಕ್ ಲೈವ್ನಲ್ಲಿ ಅವರು ಮಾತನಾಡಿದರು. ದುಡಿಮೆಗೆ ಬೇರೆ ದಾರಿಯಿಲ್ಲದ ಕಾರಣ ಜೀವನ ನಿರ್ವಹಣೆಗೆ ಕಾರ್ಮಿಕರು ಅನಿವಾರ್ಯವಾಗಿ ಇಂಥ ಅಪಾಯಕರಾರಿ ಕೆಲಸದಲ್ಲಿ ತೊಡಗುತ್ತಾರೆ ಎಂದು ಸೂಕಿ ಸಹಾನುಭೂತಿ ವ್ಯಕ್ತಪಡಿಸಿದರು.</p>.<p>ಕಾರ್ಮಿಕರು ಕಚಿನ್ ಪ್ರಾಂತ್ಯದ ಪೆಕೆಂಟ್ನಲ್ಲಿರುವ ದುರಂತ ಸ್ಥಳದ ಬಳಿಯೇ ನೆಲೆಸಿದ್ದರು. ಪರಿತ್ಯಕ್ತ ಗಣಿಯೊಳಗೆ ಕೊರೆಯಲು ಬಳಸಿದ್ದ ಭಾರಿ ಗಾತ್ರದ ಯಂತ್ರಗಳಿಗೆ ಅಂಟಿಕೊಂಡಿದ್ದ ತ್ಯಾಜ್ಯದೊಳಗೆ ಹರಳನ್ನು ಶೋಧಿಸುವ ಕೆಲಸ ಮಾಡುತ್ತಿದ್ದರು. ಅವರುಅಕ್ರಮವಾವಗಿ ಗಣಿಗಿಳಿದಿದ್ದರು.</p>.<p>ಮಳೆಗಾಲದ ಕಾರಣ ಮಣ್ಣು ಮೆದುವಾಗಿದ್ದು, ಕಾರ್ಮಿಕರ ಸಾವಿಗೆ ಕಾರಣವಾಯಿತು. ಇಂಥ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಲೇ ಇವೆ.</p>.<p>ಪ್ರಕರಣದಲ್ಲಿ 166 ಮಂದಿ ಅಸುನೀಗಿರುವುದನ್ನು, ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಮ್ಯಾನ್ಮಾರ್ನ ಅಗ್ನಿಶಾಮಕ ಇಲಾಖೆ ಖಚಿತಪಡಿಸಿದೆ. 54 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>2015ರ ನವೆಂಬರ್ನಲ್ಲಿ ನಡೆದಿದ್ದ ಇಂಥ ದುರ್ಘಟನೆಯಲ್ಲಿ 113 ಮಂದಿ ಮೃತಪಟ್ಟಿದ್ದು, ಗುರುವಾರದ ದುರಂತ ಇದುವರೆಗಿನ ಅತಿ ಹೆಚ್ಚು ಸಾವು ನೋವು ಕಂಡ ಪ್ರಕರಣ ಎನಿಸಿದೆ.</p>.<p>ಮ್ಯಾನ್ಮಾರ್ನ ಅತಿ ದೊಡ್ಡನಗರ ಯಾಂಗೂನ್ನಿಂದ 950 ಕಿ.ಮೀ ದೂರದಲ್ಲಿ (600 ಮೈಲು) ಈ ಹರಳಿನ ಗಣಿಗಳಿವೆ. ವಿಶ್ವದ ಅತ್ಯಂತ ಸಮೃದ್ಧ ಪಚ್ಚೆ ಹರಳಿನ ಉದ್ಯಮ ಇಲ್ಲಿದೆ.</p>.<p>‘ಸತ್ತವರಲ್ಲಿ ಹೆಚ್ಚಿನವರು ಹೊಟ್ಟೆಪಾಡಿಗಾಗಿ ಅಕ್ರಮವಾಗಿ ಇಂಥ ಕೆಲಸಕ್ಕೆ ಇಳಿಯುತ್ತಿದ್ದ ಕಾರ್ಮಿಕರು. ಇದು ದೇಶದಲ್ಲಿ ನಿರುದ್ಯೋಗದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಉದ್ಯೋಗ ಸೃಷ್ಟಿ ಆದ್ಯತೆಯ ವಿಷಯವಾಗಬೇಕಾಗಿದೆ’ ಎಂದು ಸೂಕಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೆಕೆಂಟ್(ಮ್ಯಾನ್ಮಾರ್):</strong> ದೇಶದ ಉತ್ತರ ಭಾಗದ ಪಚ್ಚೆ ಹರಳಿನ ಗಣಿಯಲ್ಲಿ ಗುರುವಾರ ಸಂಭವಿಸಿದ ಭೂಕುಸಿತ ದುರಂತಕ್ಕೆ ಮ್ಯಾನ್ಮಾರ್ ನಾಯಕಿ ಅಂಗ್ಸಾನ್ ಸೂಕಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 166 ಜನರ ದಾರುಣ ಸಾವಿಗೆ ಕಾರಣವಾದ ಈ ದುರ್ಘಟನೆಗೆ ನಿರುದ್ಯೋಗ ಸಮಸ್ಯೆ ಕಾರಣ ಎಂದು ಅವರು ದೂರಿದ್ದಾರೆ.</p>.<p>ನಿರ್ಮಾಣ ಉದ್ಯಮದ ಪ್ರತಿನಿಧಿಗಳ ಜೊತೆ ಶುಕ್ರವಾರ ಫೇಸ್ಬುಕ್ ಲೈವ್ನಲ್ಲಿ ಅವರು ಮಾತನಾಡಿದರು. ದುಡಿಮೆಗೆ ಬೇರೆ ದಾರಿಯಿಲ್ಲದ ಕಾರಣ ಜೀವನ ನಿರ್ವಹಣೆಗೆ ಕಾರ್ಮಿಕರು ಅನಿವಾರ್ಯವಾಗಿ ಇಂಥ ಅಪಾಯಕರಾರಿ ಕೆಲಸದಲ್ಲಿ ತೊಡಗುತ್ತಾರೆ ಎಂದು ಸೂಕಿ ಸಹಾನುಭೂತಿ ವ್ಯಕ್ತಪಡಿಸಿದರು.</p>.<p>ಕಾರ್ಮಿಕರು ಕಚಿನ್ ಪ್ರಾಂತ್ಯದ ಪೆಕೆಂಟ್ನಲ್ಲಿರುವ ದುರಂತ ಸ್ಥಳದ ಬಳಿಯೇ ನೆಲೆಸಿದ್ದರು. ಪರಿತ್ಯಕ್ತ ಗಣಿಯೊಳಗೆ ಕೊರೆಯಲು ಬಳಸಿದ್ದ ಭಾರಿ ಗಾತ್ರದ ಯಂತ್ರಗಳಿಗೆ ಅಂಟಿಕೊಂಡಿದ್ದ ತ್ಯಾಜ್ಯದೊಳಗೆ ಹರಳನ್ನು ಶೋಧಿಸುವ ಕೆಲಸ ಮಾಡುತ್ತಿದ್ದರು. ಅವರುಅಕ್ರಮವಾವಗಿ ಗಣಿಗಿಳಿದಿದ್ದರು.</p>.<p>ಮಳೆಗಾಲದ ಕಾರಣ ಮಣ್ಣು ಮೆದುವಾಗಿದ್ದು, ಕಾರ್ಮಿಕರ ಸಾವಿಗೆ ಕಾರಣವಾಯಿತು. ಇಂಥ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಲೇ ಇವೆ.</p>.<p>ಪ್ರಕರಣದಲ್ಲಿ 166 ಮಂದಿ ಅಸುನೀಗಿರುವುದನ್ನು, ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಮ್ಯಾನ್ಮಾರ್ನ ಅಗ್ನಿಶಾಮಕ ಇಲಾಖೆ ಖಚಿತಪಡಿಸಿದೆ. 54 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>2015ರ ನವೆಂಬರ್ನಲ್ಲಿ ನಡೆದಿದ್ದ ಇಂಥ ದುರ್ಘಟನೆಯಲ್ಲಿ 113 ಮಂದಿ ಮೃತಪಟ್ಟಿದ್ದು, ಗುರುವಾರದ ದುರಂತ ಇದುವರೆಗಿನ ಅತಿ ಹೆಚ್ಚು ಸಾವು ನೋವು ಕಂಡ ಪ್ರಕರಣ ಎನಿಸಿದೆ.</p>.<p>ಮ್ಯಾನ್ಮಾರ್ನ ಅತಿ ದೊಡ್ಡನಗರ ಯಾಂಗೂನ್ನಿಂದ 950 ಕಿ.ಮೀ ದೂರದಲ್ಲಿ (600 ಮೈಲು) ಈ ಹರಳಿನ ಗಣಿಗಳಿವೆ. ವಿಶ್ವದ ಅತ್ಯಂತ ಸಮೃದ್ಧ ಪಚ್ಚೆ ಹರಳಿನ ಉದ್ಯಮ ಇಲ್ಲಿದೆ.</p>.<p>‘ಸತ್ತವರಲ್ಲಿ ಹೆಚ್ಚಿನವರು ಹೊಟ್ಟೆಪಾಡಿಗಾಗಿ ಅಕ್ರಮವಾಗಿ ಇಂಥ ಕೆಲಸಕ್ಕೆ ಇಳಿಯುತ್ತಿದ್ದ ಕಾರ್ಮಿಕರು. ಇದು ದೇಶದಲ್ಲಿ ನಿರುದ್ಯೋಗದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಉದ್ಯೋಗ ಸೃಷ್ಟಿ ಆದ್ಯತೆಯ ವಿಷಯವಾಗಬೇಕಾಗಿದೆ’ ಎಂದು ಸೂಕಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>