ಕೈರಂಗಳ ಶತಮಾನದ ಶಾಲೆಗೆ ಸಿನಿತಾರೆಯ ಸ್ಪರ್ಶ
’ಅನಿರೀಕ್ಷಿತ, ಆದರೆ ಸಕಾಲಿಕ’
‘ಕನ್ನಡ ಮಾಧ್ಯಮ ಎನ್ನುವ ಕಾರಣಕ್ಕೆ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗಿ ಶಾಲೆಯ ಅಸ್ತಿತ್ವದ ಪ್ರಶ್ನೆ ಎದ್ದಿತ್ತು. ಶಾಲೆಯನ್ನು ಉಳಿಸುವ ಪ್ರಯತ್ನದಲ್ಲಿ ಅಸಹಾಯಕರಾಗಿದ್ದ ನಮಗೆ ರಿಷಭ್ ಶೆಟ್ಟಿಯವರ ಅನಿರೀಕ್ಷಿತ, ಆದರೆ ಸಕಾಲಿಕ ನೆರವು ದೊರೆತಿದ್ದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡಲು ಕಲಿಸಲಿದ್ದು, ಮುಂದೆ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೂ ಕನ್ನಡದ ಮಹತ್ವ ಹೇಳಿ ತಾರತಮ್ಯವಿಲ್ಲದೇ ಕನ್ನಡ ಬೋಧಿಸಲಾಗುವುದು. ಇದರಿಂದ ಮಕ್ಕಳಲ್ಲಿ ಭಾಷೆಯ ಬಗ್ಗೆ ಗೌರವ ಮೂಡಿಸುವಂತಾಗುತ್ತದೆ’ ಎನ್ನುತ್ತಾರೆ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಶಂಕರ ಭಟ್ ಕೊಲ್ಲರಮಜಲು.Last Updated 8 ಜೂನ್ 2019, 6:12 IST