‘ಕಾರ್ಯಕ್ರಮದ ಭಾಗವಾಗಿ ಚಂದ್ರನ ಕಕ್ಷೆಯಲ್ಲಿ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಉದ್ದೇಶವಿದೆ. ಗಗನನೌಕೆಯೊಂದು ಕ್ಷುದ್ರಗ್ರಹವೊಂದರ ಮಣ್ಣನ್ನು ಈ ಬಾಹ್ಯಾಕಾಶ ನಿಲ್ದಾಣಕ್ಕೆ ತರಲಿದೆ. ನಂತರ, ಚಂದ್ರನ ಮೇಲಿಳಿದ ವ್ಯೋಮಯಾನಿಯೊಬ್ಬರು ಕ್ಷುದ್ರಗ್ರಹದ ಮಣ್ಣನ್ನು ಭೂಮಿಗೆ ತರುವರು. ಈ ಅಂತರಿಕ್ಷ ಯಾನದ ಸಿದ್ಧತೆಯೂ ನಡೆಯುತ್ತಿದೆ’ ಎಂದು ವಿವರಿಸಿದರು.