ವಲಸೆ ಕಾರ್ಮಿಕರ ಸಂಚಾರಕ್ಕಾಗಿ ಸರ್ಕಾರ ಶ್ರಮಿಕ್ ಎಕ್ಸ್ಪ್ರೆಸ್ ರೈಲುಗಳ ಸೇವೆ ಆರಂಭಿಸಿದ ನಂತರ ಲಖನೌ ನಗರದ ಚಾರ್ಭಾಗ್ ರೈಲು ನಿಲ್ದಾಣಕ್ಕೆ ಬರುವ ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಯಿತು. ಇಂಥ ಕಾರ್ಮಿಕರಿಂದ ಪ್ರತಿಫಲವನ್ನು ಅಪೇಕ್ಷಿಸದೇ ಪೋರ್ಟರ್ ಮುಜಿಬುಲ್ಲಾ ರೆಹಮಾನ್ ಸಾಮಾನು ಸಾಗಿಸಲು ನೆರವು ನೀಡುತ್ತಿದ್ದಾರೆ.