ಫ್ಲಾರೆನ್ಸ್ ನೈಟಿಂಗೇಲ್ ಜನ್ಮ ದ್ವಿಶತಮಾನೋತ್ಸವವಾದ ಇಂದು (ಮೇ 12) ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ನೆಟಿಜನ್ನರು #InternationalNursesDay ಹ್ಯಾಷ್ಟ್ಯಾಗ್ ಬಳಸಿ ದಾರಿಯರಿಗೆ ಕೃತಜ್ಞತೆ ಅರ್ಪಿಸುತ್ತಿದ್ದಾರೆ.
‘ದಾದಿಯರ ಬದುಕಿನ ಸವಾಲಿನ ಕಾಲಘಟ್ಟವಿದು’ ಎಂದು ದಾದಿಯರ ಅಂತರರಾಷ್ಟ್ರೀಯ ಮಂಡಳಿ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದೆ.
‘ನನ್ನ ಬದುಕು ಉಳಿಸಿದ ದಾದಿಯರಿಗೆ ಪ್ರಣಾಮಗಳು’ ಎಂದು ಅಮೆರಿದ ಜನಪ್ರಿಯ ನಟಿ ಎಮಿಲಿಯಾ ಕ್ಲಾರ್ಕ್ ಟ್ವೀಟ್ ಮಾಡಿದ್ದಾರೆ.
‘ನಮ್ಮ ಹೀರೊಗಳು’ ಎಂದು ಬಾಲಿವುಡ್ ನಟಿ ಯಾಮಿ ಗೌತಮ್ ಗ್ಲೋಬ್ ಮೇಲೆ ನರ್ಸ್ ಟೋಪಿ ಮತ್ತು ಸ್ಕೆತೊಸ್ಕೋಪ್ ಇರುವ ಚಿತ್ರ ಟ್ವೀಟ್ ಮಾಡಿದ್ದಾರೆ.
Our heroes 🙏🏻👏🏻 #InternationalNursesDay pic.twitter.com/Gx4inAY9Yp
— Yami Gautam (@yamigautam) May 12, 2020
‘ಅಪಾಯಕಾರಿ ಪಿಡುಗಿನ ಸಂದರ್ಭದಲ್ಲಿಧೈರ್ಯ ಮತ್ತು ನಿಸ್ವಾರ್ಥದಿಂದ ಜಗತ್ತಿನ ಆರೋಗ್ಯವನ್ನು ಶುಶ್ರೂಷೆ ಮಾಡುತ್ತಿರುವ ದಾದಿಯರಿಗೆ ನಮ್ಮ ನಮನಗಳು’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
This #InternationalNursesDay, we salute each of our sisters & brothers in the community for their brave & selfless acts of ‘nursing the world to health’ amidst this dangerous pandemic. pic.twitter.com/vprH2EFLwy
— Congress (@INCIndia) May 12, 2020
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ದಾದಿಯರಿಗೆ ಶುಭಾಶಯ ಕೋರಿದ್ದಾರೆ.
ಎಲ್ಲರಿಗೂ 'ಅಂತರರಾಷ್ಟ್ರೀಯ ದಾದಿಯರ ದಿನ' ದ ಶುಭಾಶಯಗಳು.
— CM of Karnataka (@CMofKarnataka) May 12, 2020
ಅತ್ಯಂತ ಸೂಕ್ಷ್ಮ ಮತ್ತು ಸವಾಲಿನ ವೃತ್ತಿಯ ಜತೆಗೆ ಸಂಸಾರಿಕ ಜವಾಬ್ದಾರಿಗಳನ್ನೂ ನಿಭಾಯಿಸುತ್ತ, ಕೋವಿಡ್19ನಂತಹ ಗಂಭೀರ ಪರಿಸ್ಥಿತಿಗಳಲ್ಲಿ ಒತ್ತಡಕ್ಕೊಳಗಾಗದೆ ಸೇವೆಯಲ್ಲೇ ಸಾರ್ಥಕತೆ ಕಾಣುವ ಸಮಸ್ತ ಶುಶ್ರೂಷಕಿಯರಿಗೆ ಅಭಿನಂದನೆಗಳು.#NursesDay pic.twitter.com/hN77T5gSWY
ಪಾಂಡಿಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ದಾದಿಯೊಬ್ಬರೊಂದಿಗೆ ಮಾತನಾಡುವ ವಿಡಿಯೊ ಹಂಚಿಕೊಂಡು, ‘ಬಿಳಿಯುಡುಗೆಯಲ್ಲಿರುವ ಯೋಧರಿಗೆ ನಮನ’ ಎಂದು ಹೇಳಿದ್ದಾರೆ.
Saluting our Warriors in White coat 👩🏻⚕️, besides the ones in olive green, blue & khaki. #InternationalNursesDay 🙌🏻 @ashapondy @ANI @PTI_News @MoHFW_INDIA @WHO pic.twitter.com/bVgjOZYMaJ
— Kiran Bedi (@thekiranbedi) May 12, 2020
‘ಶುಶ್ರೂಷೆ ಎನ್ನುವುದು ನನ್ನ ಆತ್ಮದ ಭಾಗ’ ಎಂದಿರುವ ನರ್ಸ್ ಪೊಲ್ಲಿ ಮೊಲಿನಾ ಅವರ ಇನ್ಸ್ಟಾಗ್ರಾಂ ಪೋಸ್ಟ್ ಭಾವುಕ ಬರಹದಿಂದ ಗಮನ ಸೆಳೆಯುತ್ತದೆ.
‘ಶುಶ್ರೂಷಕರ ಕಾರ್ಯ ಯಾವ ಬಲಿದಾನಕ್ಕೂ ಕಡಿಮೆಯಲ್ಲ’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇಂದು ವಿಶ್ವ ಶುಶ್ರೂಷಕರ ದಿನ #InternationalNursesDay. ಕೊರೊನಾ ವೈರಸ್ ಎಂಬ ಮಾರಕ ಕಾಯಿಲೆ ಒಡ್ಡಿರುವ ಸವಾಲಿಗೆ, ತ್ಯಾಗಗಳ ಮೂಲಕ ಪ್ರತಿ ಸವಾಲು ಹಾಕಿರುವ ವಿಶ್ವದ ಶುಶ್ರೂಷಕರು ಮನುಕುಲದ ಆರೈಕೆಯಲ್ಲಿ ತೊಡಗಿದ್ದಾರೆ. ಅವರ ಈ ಕಾರ್ಯ ಯಾವ ಬಲಿದಾನಕ್ಕೂ ಕಡಿಮೆಯಾದದ್ದಲ್ಲ. ಈ ಹೊತ್ತಿನಲ್ಲಿ ಅವರನ್ನು ಹೃದಯಪೂರ್ವಕವಾಗಿ ಸ್ಮರಿಸುತ್ತೇನೆ.
— H D Kumaraswamy (@hd_kumaraswamy) May 12, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.