<p><strong>ಗುರುಗ್ರಾಮ</strong>: ದೀಪಾವಳಿಗೆ ಪರಿಸರಕ್ಕೆ ಹಾನಿ ಮಾಡದೇ ಹಸಿರು ಪಟಾಕಿ ಅಥವಾ ದೀಪದ ಮೂಲಕ ಆಚರಿಸಿ ಎಂದು ಎಷ್ಟೇ ಕರೆ ಕೊಟ್ಟರೂ ಕೆಲವರು ಈ ಮಾತು ಕೇಳಿಸಿಕೊಳ್ಳುವುದಿಲ್ಲ. ಇನ್ನೂ ಕೆಲವರು ಅತಿರೇಕಕ್ಕೆ ಹೋಗಿ ಆಪತ್ತು ತಂದಿಟ್ಟುಕೊಳ್ಳುತ್ತಾರೆ.</p>.<p>ಇದೇ ರೀತಿ ಸಾರ್ವಜನಿಕರಿಗೆ ಅಪಾಯ ಆಗುವ ರೀತಿಯಲ್ಲಿ ದೀಪಾವಳಿಯಲ್ಲಿ ಪಟಾಕಿ ಹೊಡೆಯಲು ಹೋಗಿ ಗುರುಗ್ರಾಮದ ಮೂವರು ಯುವಕರು ಪೊಲೀಸ್ ಅಥಿತಿಗಳಾಗಿದ್ದಾರೆ.</p>.<p>ದೀಪಾವಳಿ ಪ್ರಯುಕ್ತ ಕಳೆದ ಅ.24 ರಂದು ರಾತ್ರಿ ಗುರುಗ್ರಾಮದ ಸೆಕ್ಟರ್ 3 ನಲ್ಲಿ ಹೆದ್ದಾರಿಗಳಲ್ಲಿ ಕಾರಿನ ಮೇಲೆ ಬಾಣ ಬಿರಿಸುಗಳನ್ನು ಹಾಗೂ ಪಟಾಕಿಗಳನ್ನು ಹಚ್ಚಿ ಮೋಜಿನಾಟ ಆಡುತ್ತಾ ಕಾರು ಚಲಾಯಿಸುತ್ತಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡಿತ್ತು.</p>.<p>ವಿಡಿಯೊ ಗಮನಿಸಿದ ಗುರುಗ್ರಾಮ ಸಾರ್ವಜನಿಕರು ಇಂತಹ ಹುಡುಗರಿಗೆ ಬುದ್ಧಿ ಕಲಿಸಲು ಮನವಿ ಮಾಡಿದ್ದರು. ಕಡೆಗೂ ಮಂಗನಾಟ ಮೆರೆದಿದ್ದ ಯುವಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರೂ ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಗ್ರಾಮ</strong>: ದೀಪಾವಳಿಗೆ ಪರಿಸರಕ್ಕೆ ಹಾನಿ ಮಾಡದೇ ಹಸಿರು ಪಟಾಕಿ ಅಥವಾ ದೀಪದ ಮೂಲಕ ಆಚರಿಸಿ ಎಂದು ಎಷ್ಟೇ ಕರೆ ಕೊಟ್ಟರೂ ಕೆಲವರು ಈ ಮಾತು ಕೇಳಿಸಿಕೊಳ್ಳುವುದಿಲ್ಲ. ಇನ್ನೂ ಕೆಲವರು ಅತಿರೇಕಕ್ಕೆ ಹೋಗಿ ಆಪತ್ತು ತಂದಿಟ್ಟುಕೊಳ್ಳುತ್ತಾರೆ.</p>.<p>ಇದೇ ರೀತಿ ಸಾರ್ವಜನಿಕರಿಗೆ ಅಪಾಯ ಆಗುವ ರೀತಿಯಲ್ಲಿ ದೀಪಾವಳಿಯಲ್ಲಿ ಪಟಾಕಿ ಹೊಡೆಯಲು ಹೋಗಿ ಗುರುಗ್ರಾಮದ ಮೂವರು ಯುವಕರು ಪೊಲೀಸ್ ಅಥಿತಿಗಳಾಗಿದ್ದಾರೆ.</p>.<p>ದೀಪಾವಳಿ ಪ್ರಯುಕ್ತ ಕಳೆದ ಅ.24 ರಂದು ರಾತ್ರಿ ಗುರುಗ್ರಾಮದ ಸೆಕ್ಟರ್ 3 ನಲ್ಲಿ ಹೆದ್ದಾರಿಗಳಲ್ಲಿ ಕಾರಿನ ಮೇಲೆ ಬಾಣ ಬಿರಿಸುಗಳನ್ನು ಹಾಗೂ ಪಟಾಕಿಗಳನ್ನು ಹಚ್ಚಿ ಮೋಜಿನಾಟ ಆಡುತ್ತಾ ಕಾರು ಚಲಾಯಿಸುತ್ತಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡಿತ್ತು.</p>.<p>ವಿಡಿಯೊ ಗಮನಿಸಿದ ಗುರುಗ್ರಾಮ ಸಾರ್ವಜನಿಕರು ಇಂತಹ ಹುಡುಗರಿಗೆ ಬುದ್ಧಿ ಕಲಿಸಲು ಮನವಿ ಮಾಡಿದ್ದರು. ಕಡೆಗೂ ಮಂಗನಾಟ ಮೆರೆದಿದ್ದ ಯುವಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರೂ ಮುಖ್ಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>