ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯ ದಿನವಾದ ವಿಜಯದಶಮಿಯಂದು 21 ಸುತ್ತಿನ ಕುಶಾಲ ತೋಪು ಸಿಡಿಸಲಾಗುತ್ತದೆ. ಆ ಸಮಯದಲ್ಲಿ ದಸರಾ ಆನೆಗಳು ಹಾಗೂ ಕುದುರೆಗಳು ಕಿವಿಗಡಚಿಕ್ಕುವ ಶಬ್ದದಂತೆ ಬೆಚ್ಚದಂತೆ ಮಾಡಲು, ದಸರಾ ಜಂಬೂ ಸವಾರಿ ಸಾಂಗವಾಗಿ ನಡೆಯುವಂತೆ ಮಾಡಲು ಕುಶಾಲ ತೋಪಿನ ತಾಲೀಮು ನೀಡುವುದು ವಾಡಿಕೆ. ಅದರಂತೆ ಅರಮನೆ ಆವರಣದ ವರಾಹ ದ್ವಾರದ ಬಳಿ ಕುಶಾಲ ತೋಪುಗಳಲ್ಲಿ ಸಿಡಿಮದ್ದನ್ನು ತುಂಬಿ ಸಿಡಿಸಲು 7 ಫಿರಂಗಿಗಳನ್ನು ಅಣಿಗೊಳಿಸಲಾಯಿತು.