ನಾಡಿನ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ 'ಪ್ರಜಾವಾಣಿ'ಗೆ ಈಗ ಅಮೃತ ಮಹೋತ್ಸವದ ಸಂಭ್ರಮ. ಸಂಸ್ಥೆಯ ವಾರಪತ್ರಿಕೆ ‘ಸುಧಾ’ದಲ್ಲಿ ಪ್ರಕಟವಾಗಿದ್ದ ಅಂತ ಮತ್ತು ಹಿಮಪಾತ ಕಾದಂಬರಿಗಳನ್ನು ಚಲನಚಿತ್ರಗಳನ್ನಾಗಿ ರೂಪಿಸಿದ್ದು, ತಮ್ಮ ವೃತ್ತಿಜೀವನದ ಅತಿ ಮಹತ್ವದ ಘಟ್ಟ ಎಂದು ಹೆಮ್ಮೆಯಿಂದ ಹೇಳುವ, ಹಿರಿಯ ನಿರ್ದೇಶಕ ಬಾಬು ರಾಜೇಂದ್ರ ಸಿಂಗ್ ಬಾಬು, ‘ಪ್ರಜಾವಾಣಿ’ಯೊಂದಿಗಿನ ತಮ್ಮ ನಂಟನ್ನು ಹಂಚಿಕೊಂಡಿದ್ದಾರೆ.