ನಾಡಿನ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ‘ಪ್ರಜಾವಾಣಿ’ಗೆ ಈಗ ಅಮೃತ ಮಹೋತ್ಸವದ ಸಡಗರ. ಸಂಸ್ಥೆಯ ಸಂಸ್ಥಾಪಕರಾದ ಕೆ.ಎನ್. ಗುರುಸ್ವಾಮಿಯವರ ದೂರದೃಷ್ಟಿಯನ್ನು ಪ್ರಶಂಸಿಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಮೌಲ್ಯಗಳನ್ನು ಉಳಿಸುವ ಪರಂಪರೆಯನ್ನು ಪ್ರಜಾವಾಣಿ ಮುಂದುವರಿಸಿಕೊಂಡು ಬರುತ್ತಿದೆ’ ಎಂದು ಶ್ಲಾಘಿಸಿದ್ದಾರೆ.