ಪೂರ್ವ ಲಡಾಖ್ನ ಗಡಿಯಲ್ಲಿರುವ ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ, ಭಾರತದ ಯೋಧರು ಚೀನಾದ ಸೈನಿಕರನ್ನು ಹತ್ಯೆ ಮಾಡಿದ್ದರು. ಇದನ್ನು ಮೊದಲು ಒಪ್ಪದಿದ್ದ ಚೀನಾ, ನಂತರ ತನ್ನ ನಾಲ್ವರು ಸೈನಿಕರು ಹತ್ಯೆಯಾಗಿದ್ದಾರೆ ಎಂದಿತ್ತು. ಈ ಬಗ್ಗೆ ಚೀನಾದ ಖ್ಯಾತ ಬ್ಲಾಗರ್ವೊಬ್ಬರು ಬರೆದಿದ್ದ ಲೇಖನ ಸೈನಿಕರನ್ನು ಅವಮಾನಿಸಿದೆ ಎಂದು ಕಿಡಿಕಾರಿದ್ದ ಕಮ್ಯುನಿಸ್ಟ್ ಸರ್ಕಾರ, ಬ್ಲಾಗರ್ಗೆ ಶಿಕ್ಷೆ ವಿಧಿಸಿತ್ತು.