‘ಭಾರತವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ನೆರವು ಕಲ್ಪಿಸಲು ಭಾರತ ಮತ್ತು ದುಬೈ ನಡುವೆ ವಾಯು ಸೇತುವೆಯನ್ನು ಸ್ಥಾಪಿಸಲಾಗಿದ್ದು, ಈ ಸೇವೆಯು ತಕ್ಷಣದಿಂದ ಕಾರ್ಯ ನಿರ್ವಹಿಸಲಿದೆ’ ಎಂದು ಎಮಿರೇಟ್ಸ್ ಸ್ಕೈ ಕಾರ್ಗೊದ ಹಿರಿಯ ಉಪಾಧ್ಯಕ್ಷ ನಾಬಿಲ್ ಸುಲ್ತಾನ್ ಹೇಳಿದರು.