ಆಂಧ್ರ ಪ್ರದೇಶ ಮೂಲದ ಡಾ. ಗಿರಿಕುಮಾರ್ ಪಾಟೀಲ್, 2007ರಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ಗೆ ತೆರಳಿದ್ದ ಅವರು, ಬಳಿಕ ಅಲ್ಲಿಯೇ ಕೆಲಸಕ್ಸೆ ಸೇರಿದ್ದರು. ಇದೀಗ, ಯುದ್ಧ ನಡೆಯುತ್ತಿರುವುದರಿಂದ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ಆದರೆ, ತಮ್ಮ ಸಾಕು ಪ್ರಾಣಿಗಳಿಗೆ ವಿಮಾನದಲ್ಲಿ ಅವಕಾಶ ನೀಡದ ಕಾರಣ ಅವರೂ ಸಹ ಅಲ್ಲಿಯೇ ಉಳಿದಿದ್ದಾರೆ.