ಯೌಂಡೆ (ಕ್ಯಾಮರೂನ್) (ಎಪಿ): ಕ್ಯಾಮರೂನ್ ರಾಜಧಾನಿಯಲ್ಲಿ ಭಾನುವಾರ ನಡೆಯುತ್ತಿದ್ದ ಅಂತ್ಯಕ್ರಿಯೆ ವೇಳೆ ಸಂಭವಿಸಿದ ಭೂಕುಸಿತದಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ.
ಕಾಣೆಯಾದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಘಟನಾ ಸ್ಥಳದಲ್ಲಿ ಈಗಾಗಲೇ 14 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಗಾಯಗೊಂಡಿರುವ 12 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದುಕೇಂದ್ರೀಯ ಪ್ರಾದೇಶಿಕ ಗವರ್ನರ್ ನಸೇರಿ ಪೌಲ ಬೇ ಅವರು ತಿಳಿಸಿದ್ದಾರೆ.