ನ್ಯೂಯಾರ್ಕ್:ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದು 14 ವರ್ಷಗಳು ಸಂದಿರುವ ಸಂದರ್ಭದಲ್ಲಿ ಭಾರತೀಯ ವಲಸಿಗರು, ಇಲ್ಲಿರುವ ಪಾಕಿಸ್ತಾನ ಕಾನ್ಸುಲೇಟ್ ಕಚೇರಿ ಹೊರಗೆ ಪ್ರತಿಭಟನೆ ನಡೆಸಿದರು. ಈ ದಾಳಿಯ ದುಷ್ಕರ್ಮಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಾ, ಜನರು ‘ಮುಂಬೈ 26/11’ ಅನ್ನು ಕ್ಷಮಿಸುವುದಿಲ್ಲ. ನಾವು ಮರೆಯುವುದಿಲ್ಲ’ ಎಂಬ ಫಲಕಗಳನ್ನು ಪ್ರದರ್ಶಿಸಿದರು.
26/11ರ ಸಂಚುಕೋರ ಹಫೀಜ್ ಸಯೀದ್ ಮತ್ತು ಭಯೋತ್ಪಾದಕ ಅಜ್ಮಲ್ ಕಸಬ್ ಚಿತ್ರಗಳು ಹಾಗೂ ಭಯೋತ್ಪಾದಕರು ಕಟ್ಟಡದ ಮೇಲೆ ದಾಳಿ ಮಾಡಿದಾಗ ಉರಿಯುತ್ತಿರುವ ತಾಜ್ ಹೋಟೆಲ್ನ ಚಿತ್ರಗಳನ್ನು ತೋರಿಸುವ ‘ಡಿಜಿಟಲ್ ವ್ಯಾನ್’ ಅನ್ನು ಕಾನ್ಸುಲೇಟ್ ಕಚೇರಿಯ ಹೊರಗೆ ನಿಲ್ಲಿಸಲಾಗಿತ್ತು.