ಮೊದಲ ಬಾರಿಗೆ ಮತದಾನ ನಡೆದಾಗ, ಐವರು ಸ್ಪರ್ಧಿಗಳ ಪೈಕಿ ಯಾರಿಗೂ ಶೇ 50ಕ್ಕಿಂತ ಹೆಚ್ಚು ಮತಗಳು ಲಭಿಸಲಿಲ್ಲ. ಅಧ್ಯಕ್ಷರಾಗಲು ಅಗತ್ಯವಿದ್ದ ಸ್ಪಷ್ಟ ಬಹುಮತ ಸಿಗದ ಕಾರಣ ಮತ್ತೊಮ್ಮೆ ಮತದಾನ ಪ್ರಕ್ರಿಯೆ ನಡೆಸಲಾಯಿತು. ಆಗ, ಅಭ್ಯರ್ಥಿಗಳಾದ ಪ್ರಕಾಶ್ ಮಾನಸಿಂಗ್, ವಿಮಲೇಂದ್ರ ನಿಧಿ ಹಾಗೂ ಕಲ್ಯಾಣ್ ಗುರುಂಗ್ ಅವರು ದೇವುಬಾ ಅವರಿಗೆ ಬೆಂಬಲ ಘೋಷಿಸಿ, ಕಣದಿಂದ ಹಿಂದೆ ಸರಿದರು. ಇದು ಬಹುಮತ ಪಡೆಯುವಲ್ಲಿ ದೇವುಬಾ ಅವರಿಗೆ ನೆರವಾಯಿತು ಎಂದು ‘ಹಿಮಾಲಯನ್ ಟೈಮ್ಸ್’ ದೈನಿಕ ವರದಿ ಮಾಡಿದೆ.