ಕೊಲಂಬೊ: 2019ರಲ್ಲಿ ಈಸ್ಟರ್ ದಿನ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಅಧಿಕಾರಿಗಳಾದ ಮಾಜಿ ಪೊಲೀಸ್ ಮುಖ್ಯಸ್ಥ ಪೂಜಿತ್ ಜಯಸುಂದರ ಹಾಗೂ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಅವರನ್ನು ಇಲ್ಲಿನ ಹೈಕೋರ್ಟ್ ಶುಕ್ರವಾರ ಆರೋಪ ಮುಕ್ತಗೊಳಿಸಿದೆ.
ಈ ಪ್ರಕರಣದಲ್ಲಿ ಈ ಇಬ್ಬರು ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪ ಎದುರಿಸುತ್ತಿದ್ದರು.
ಈಸ್ಟರ್ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದಾಗ, 2019ರ ಏಪ್ರಿಲ್ 21ರಂದು ಮೂರು ಚರ್ಚ್ಗಳು ಹಾಗೂ ಐಷಾರಾಮಿ ಹೋಟೆಲ್ಗಳಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆ ನ್ಯಾಷನಲ್ ತೌಹೀದ್ ಜಮಾತ್ ಗೆ (ಎನ್ಟಿಜೆ) ಸೇರಿದ ಒಂಬತ್ತು ಮಂದಿ ಆತ್ಮಾಹುತಿ ಬಾಂಬರ್ಗಳು ಸರಣಿ ಬಾಂಬ್ ಸ್ಫೋಟ ನಡೆಸಿದ್ದರು.
ಈ ಘಟನೆಯಲ್ಲಿ 11 ಜನ ಭಾರತೀಯರು ಸೇರಿ 270 ಮಂದಿ ಮೃತಪಟ್ಟು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದಾದ ನಂತರ, ಉಗ್ರರ ದಾಳಿ ತಡೆಯುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ಪೂಜಿತ್ ಜಯಸುಂದರ ಹಾಗೂ ಹೇಮಸಿರಿ ಫರ್ನಾಂಡೊ ಅವರನ್ನು 2019ರ ಜುಲೈನಲ್ಲಿ ಬಂಧಿಸಲಾಗಿತ್ತು.