ಸಿಂಗಪುರ: ಥೈಪುಸಂ ಉತ್ಸವವನ್ನು ಭಾನುವಾರ ಸಿಂಗಪುರದಲ್ಲಿರುವ ತಮಿಳು ಸಮುದಾಯದವರು ಸಂಭ್ರಮದಿಂದ ಆಚರಿಸಿದರು.
ಈ ಹಬ್ಬವು ಮುರುಗನ್ ದೇವರನ್ನು ಸ್ಮರಿಸುವ ಉತ್ಸವವಾಗಿದ್ದು, ಸಾವಿರಾರು ಭಕ್ತರು ಭಾಗವಹಿಸಿದ್ದರು.
ಇಲ್ಲಿನ ಶ್ರೀನಿವಾಸ ಮೆರುಮಲ್ ದೇವಾಲಯದಲ್ಲಿ ಉತ್ಸವದ ಅಂಗವಾಗಿ 35,000 ಹೆಚ್ಚು ಭಕ್ತರು ಸೇರಿದ್ದರು. ತೆಂಡಯುತಾಣಿ ದೇವಾಲಯಕ್ಕೂ ಹಾಲಿನ ಕಳಶವನ್ನು ಹೊತ್ತು ಬಂದರು. 450 ಮಂದಿ ಬರಿಗಾಲಲ್ಲಿ 3.2 ಕಿ.ಮೀ ದೂರ ನಡೆದು ಮುರುಗನ್ ದೇವರ ದರ್ಶನ ಪಡೆದರು.