‘ಅಶೋಕ ಅವರು ಒಂದು ಎಕರೆ ಜಮೀನಿನಲ್ಲಿ ‘ಜಿ– 9’ ತಳಿಯ ಬಾಳೆ ಬೆಳೆದಿದ್ದಾರೆ. ಮಣ್ಣು ಹದದಿಂದ ಹಿಡಿದು, ಗಿಡಗಳು ದೊಡ್ಡದಾಗುವವರೆಗೂ ಹೆಚ್ಚಿನ ಕಾಳಜಿ ಮಾಡಿದ್ದಾರೆ. ಹಂತ ಹಂತವಾಗಿ ಗಿಡಗಳಿಗೆ ಪೋಷಕಾಂಶ ಹಾಗೂ ಔಷಧೋಪಚಾರ ನೀಡಿದ್ದಾರೆ. ಇದರ ಫಲವಾಗಿ, ಇಂದು ಬಾಳೆ ಉತ್ತಮವಾಗಿ ಬೆಳೆದಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.