<p><strong>ಆಲಮೇಲ:</strong>ಪಟ್ಟಣದ ಯುವ ರೈತ ರಾಜಕುಮಾರ ಕೋಣಶಿರಸಗಿ ಆಲಮೇಲ ತಾಲ್ಲೂಕಿನಲ್ಲಿಯೇ ಹೊಸ ಪ್ರಯೋಗ ನಡೆಸಿದ್ದಾರೆ. ‘ಶತಾವರಿ’ ಎಂಬ ಔಷಧಿ ಸಸ್ಯ ಬೆಳೆಯನ್ನು ತಮ್ಮ ಹೊಲದಲ್ಲಿ ಬೆಳೆಯುವ ಮೂಲಕ ಕೃಷಿ ಕ್ರಾಂತಿಗೆ ಕೈ ಹಾಕಿದ್ದಾರೆ.</p>.<p>ಈ ಔಷಧಿ ಬೆಳೆಯನ್ನು ಬೆಳೆದ ಸಾಧಕರ ಕುರಿತು ಓದಿ, ಅದನ್ನು ಮಾಡುವ ಕುತೂಹಲದಿಂದ ಆರಂಭದಲ್ಲಿ ಒಂದು ಎಕರೆಯಲ್ಲಿ ಮಾಡಿರುವೆ ಎನ್ನುವ ರಾಜಕುಮಾರ, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಉಮೇದು ಹೊಂದಿದ್ದಾರೆ. 15 ಎಕರೆ ಕೃಷಿ ಭೂಮಿ ಇವರಿಗಿದೆ.</p>.<p>‘ಶತಾವರಿ’ ಇದೊಂದು ಔಷಧ ಸಸ್ಯ. ಹೆಚ್ಚಾಗಿ ಕಾಡಲ್ಲಿ ಬೆಳೆಯುತ್ತದೆ. ಇದು ಎಂಥಹ ಭೂಮಿಯಲ್ಲಾದರೂ ಬೆಳೆಯಬಲ್ಲದು. ಮೇಲೆ ಉಗಡೆ ನೋಡಲು ಸಬ್ಬಸಿಗೆ ಸೊಪ್ಪಿನಂತಿದೆ, ಬಳ್ಳಿಯ ರೂಪದಲ್ಲಿ ಇರುತ್ತದೆ. ಗೆಣಸು ತರಹ ಭೂಮಿಯೊಳಗಡೆ ಬೇರು ಬಿಡುತ್ತದೆ. ಈ ಬೇರು ಒಣಗಿಸಿ ಅದನ್ನು ಸಂಸ್ಕರಿಸಿ, ನೂರಾರು ರೋಗಗಳಿಗೆ ಔಷಧ ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಬಹಳ ಬೇಡಿಕೆಯೂ ಇದೆ.</p>.<p>ಇದೆಲ್ಲವನ್ನೂ ತಿಳಿದುಕೊಂಡ ರಾಜಕುಮಾರ, ಪ್ರಸಕ್ತ 5000 ಶತಾವರಿ ಸಸಿಗಳನ್ನು ಮಹಾರಾಷ್ಟ್ರದ ಮಂಗಳವೇಡಾದಿಂದ ತರಿಸಿಕೊಂಡು ನಾಟಿ ಮಾಡಿದ್ದಾರೆ. 18ನೇ ತಿಂಗಳಲ್ಲಿ ಈ ಬೆಳೆ ಕಟಾವಿಗೆ ಬರುತ್ತದೆ. ನಂತರ ಜೆಸಿಬಿ ಯಂತ್ರದ ಸಹಾಯದಿಂದ ಕಿತ್ತು, ಒಣಗಿಸಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ.</p>.<p>ಖರ್ಚು: ‘ಪ್ರತಿ ಸಸಿಗೆ ₹ 20ರಂತೆ, 5000 ಸಸಿಗೆ ₹ 1 ಲಕ್ಷ. ತುಂತುರು ನೀರು ಸರಬರಾಜಿಗೆ ₹ 50,000. ಆರಂಭದಲ್ಲಿ ಇತರೆ ₹ 50,000 ಖರ್ಚು ತಗುಲಲಿದೆ. ಒಟ್ಟಾರೆ ₹ 2 ಲಕ್ಷ ಖರ್ಚು ಬರುತ್ತದೆ. ಇದನ್ನು ನೋಡಿಕೊಳ್ಳಲು ಒಬ್ಬ ಕೆಲಸಗಾರ ಇದ್ದಾನೆ. ಇಳುವರಿ ಹೆಚ್ಚು ಬರಲು ತಿಪ್ಪೆಗೊಬ್ಬರ ಹಾಕಿದ್ದೇನೆ’ ಎನ್ನುವ ರಾಜಕುಮಾರ, ‘ಶತಾವರಿಗೆ ಯಾವುದೇ ರೋಗ ಬರುವುದಿಲ್ಲ’ ಎನ್ನುತ್ತಾರೆ.</p>.<p>‘ವಾರಕ್ಕೆ ಕನಿಷ್ಠ ಎರಡು ಸಲ ಡ್ರಿಪ್ ಮೂಲಕ ನೀರುಣಿಸಬೇಕು. ಎರಡು ಬೋರ್ವೆಲ್ಗಳು ಹೊಲದಲ್ಲಿ ಇದ್ದು, ನೀರಿನ ಕೊರತೆಯಾಗಿಲ್ಲ. ಇದರ ಜತೆಗೆ ದ್ರಾಕ್ಷಿ ಬೆಳೆಯನ್ನು ಮಾಡಿರುವುದರಿಂದ ಎರಡೂ ಬೆಳೆಗೆ ನೀರು ಸಾಕಾಗುತ್ತದೆ’ ಎಂದು ಕೋಣಶಿರಸಗಿ ಹೇಳಿದರು.</p>.<p>ಇಳುವರಿ: ‘ಪ್ರತಿ ಗಿಡವು ಕನಿಷ್ಠ ಎರಡರಿಂದ ಮೂರು ಕೆ.ಜಿ.ಯಷ್ಟು ಶತಾವರಿ ಬೇರು (ಒಣಗಿಸಿದ ಮೇಲೆ) ಕೊಡುತ್ತದೆ. ಒಂದು ಎಕರೆಗೆ ಕನಿಷ್ಠ ಏನಿಲ್ಲವೆಂದರೂ ಎಲ್ಲಾ ಖರ್ಚು ಕಳೆದು, ಒಂದೂವರೆ ವರ್ಷಕ್ಕೆ ₹ 5 ಲಕ್ಷ ಕೈಗೆ ಸಿಗಲಿದೆ ಎಂಬ ಲೆಕ್ಕಾಚಾರವನ್ನು ಕಂಪನಿಯೊಂದು ನೀಡಿದೆಯಂತೆ. ಹೊಲಕ್ಕೆ ಬಂದು ಬೆಳೆಯನ್ನು ಒಪ್ಪಂದ ಮಾಡಿಕೊಂಡ ಕಂಪನಿಯವರು ತೆಗೆದುಕೊಂಡು ಹೋಗುತ್ತಾರೆ.’</p>.<p>‘ಈ ಬೆಳೆಗೆ ಯಾವುದೇ ಕೀಟನಾಶಕ ಸಿಂಪಡಿಸುವ ಖರ್ಚು ಬರುವುದಿಲ್ಲ. ಲಾಗೋಡಿ ಕಡಿಮೆ. ಈ ಔಷಧಿ ಸಸ್ಯವನ್ನು ಮಹಾರಾಷ್ಟ್ರದಲ್ಲಿ ಹೆಚ್ಚು ರೈತರು ಬೆಳೆಯುತ್ತಿದ್ದಾರೆ. ನಮ್ಮಲ್ಲಿ ಅತ್ಯಂತ ವಿರಳ, ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದರಿಂದ ಕಡಿಮೆ ಭೂಮಿ ಇದ್ದಾಗಲೂ, ರೈತ ಹೆಚ್ಚು ಸಂಪಾದನೆ ಮಾಡಬಹುದು ಎಂಬ ಆತ್ಮವಿಶ್ವಾಸ’ ಅವರದ್ದು.</p>.<p><strong>ಪ್ರಯೋಗಗಳು ನಡೆಯಲಿ..!</strong></p>.<p>15 ಎಕರೆಯಲ್ಲಿ ಮೂರು ಎಕರೆ ದ್ರಾಕ್ಷಿ ಮಾಡಿದ್ದಾರೆ. ಉಳಿದ ಭೂಮಿಯಲ್ಲಿ ಸಾಂಪ್ರದಾಯಿಕ ಆಹಾರ ಬೆಳೆಗಳನ್ನು ಬೆಳೆಯುತ್ತಿರುವುದಾಗಿ ಹೇಳಿದ ರಾಜಕುಮಾರ, ‘ರೈತನಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಬೆಳೆ ಬೆಳೆಯುವ ಬಗ್ಗೆ ಹೇಳಿಕೊಡಬೇಕಿದೆ.’</p>.<p>‘ಬೇಸಿಗೆಯಲ್ಲಿ ಪಪ್ಪಾಯಿ, ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಬೆಳೆಗಳನ್ನು ಕಡಿಮೆ ಅವಧಿಯಲ್ಲಿ ಬೆಳೆಯಬಹುದು. ಮುಂದಿನ ಬೇಸಿಗೆಗೆ ಬರುವಂತೆ ಬೆಳೆಯುವ ಹಂಬಲವಿದೆ. ಕೃಷಿ ಬಗ್ಗೆ ಅಧ್ಯಯನ ಮಾಡಿಕೊಂಡು, ರೈತರು ಹೊಸ ಬೆಳೆಗಳನ್ನು ಈ ಭಾಗಕ್ಕೆ ತರಬೇಕಿದೆ. ಜತೆಗೆ ಅದನ್ನು ಎಲ್ಲರಿಗೂ ತಿಳಿಸುವ ಕೆಲಸ ನಡೆಸಬೇಕು’ ಎನ್ನುತ್ತಾರೆ ರಾಜಕುಮಾರ ಕೋಣಶಿರಸಗಿ.</p>.<p><strong>ಸಂಪರ್ಕ ಸಂಖ್ಯೆ: </strong>9845540876</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮೇಲ:</strong>ಪಟ್ಟಣದ ಯುವ ರೈತ ರಾಜಕುಮಾರ ಕೋಣಶಿರಸಗಿ ಆಲಮೇಲ ತಾಲ್ಲೂಕಿನಲ್ಲಿಯೇ ಹೊಸ ಪ್ರಯೋಗ ನಡೆಸಿದ್ದಾರೆ. ‘ಶತಾವರಿ’ ಎಂಬ ಔಷಧಿ ಸಸ್ಯ ಬೆಳೆಯನ್ನು ತಮ್ಮ ಹೊಲದಲ್ಲಿ ಬೆಳೆಯುವ ಮೂಲಕ ಕೃಷಿ ಕ್ರಾಂತಿಗೆ ಕೈ ಹಾಕಿದ್ದಾರೆ.</p>.<p>ಈ ಔಷಧಿ ಬೆಳೆಯನ್ನು ಬೆಳೆದ ಸಾಧಕರ ಕುರಿತು ಓದಿ, ಅದನ್ನು ಮಾಡುವ ಕುತೂಹಲದಿಂದ ಆರಂಭದಲ್ಲಿ ಒಂದು ಎಕರೆಯಲ್ಲಿ ಮಾಡಿರುವೆ ಎನ್ನುವ ರಾಜಕುಮಾರ, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಉಮೇದು ಹೊಂದಿದ್ದಾರೆ. 15 ಎಕರೆ ಕೃಷಿ ಭೂಮಿ ಇವರಿಗಿದೆ.</p>.<p>‘ಶತಾವರಿ’ ಇದೊಂದು ಔಷಧ ಸಸ್ಯ. ಹೆಚ್ಚಾಗಿ ಕಾಡಲ್ಲಿ ಬೆಳೆಯುತ್ತದೆ. ಇದು ಎಂಥಹ ಭೂಮಿಯಲ್ಲಾದರೂ ಬೆಳೆಯಬಲ್ಲದು. ಮೇಲೆ ಉಗಡೆ ನೋಡಲು ಸಬ್ಬಸಿಗೆ ಸೊಪ್ಪಿನಂತಿದೆ, ಬಳ್ಳಿಯ ರೂಪದಲ್ಲಿ ಇರುತ್ತದೆ. ಗೆಣಸು ತರಹ ಭೂಮಿಯೊಳಗಡೆ ಬೇರು ಬಿಡುತ್ತದೆ. ಈ ಬೇರು ಒಣಗಿಸಿ ಅದನ್ನು ಸಂಸ್ಕರಿಸಿ, ನೂರಾರು ರೋಗಗಳಿಗೆ ಔಷಧ ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಬಹಳ ಬೇಡಿಕೆಯೂ ಇದೆ.</p>.<p>ಇದೆಲ್ಲವನ್ನೂ ತಿಳಿದುಕೊಂಡ ರಾಜಕುಮಾರ, ಪ್ರಸಕ್ತ 5000 ಶತಾವರಿ ಸಸಿಗಳನ್ನು ಮಹಾರಾಷ್ಟ್ರದ ಮಂಗಳವೇಡಾದಿಂದ ತರಿಸಿಕೊಂಡು ನಾಟಿ ಮಾಡಿದ್ದಾರೆ. 18ನೇ ತಿಂಗಳಲ್ಲಿ ಈ ಬೆಳೆ ಕಟಾವಿಗೆ ಬರುತ್ತದೆ. ನಂತರ ಜೆಸಿಬಿ ಯಂತ್ರದ ಸಹಾಯದಿಂದ ಕಿತ್ತು, ಒಣಗಿಸಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ.</p>.<p>ಖರ್ಚು: ‘ಪ್ರತಿ ಸಸಿಗೆ ₹ 20ರಂತೆ, 5000 ಸಸಿಗೆ ₹ 1 ಲಕ್ಷ. ತುಂತುರು ನೀರು ಸರಬರಾಜಿಗೆ ₹ 50,000. ಆರಂಭದಲ್ಲಿ ಇತರೆ ₹ 50,000 ಖರ್ಚು ತಗುಲಲಿದೆ. ಒಟ್ಟಾರೆ ₹ 2 ಲಕ್ಷ ಖರ್ಚು ಬರುತ್ತದೆ. ಇದನ್ನು ನೋಡಿಕೊಳ್ಳಲು ಒಬ್ಬ ಕೆಲಸಗಾರ ಇದ್ದಾನೆ. ಇಳುವರಿ ಹೆಚ್ಚು ಬರಲು ತಿಪ್ಪೆಗೊಬ್ಬರ ಹಾಕಿದ್ದೇನೆ’ ಎನ್ನುವ ರಾಜಕುಮಾರ, ‘ಶತಾವರಿಗೆ ಯಾವುದೇ ರೋಗ ಬರುವುದಿಲ್ಲ’ ಎನ್ನುತ್ತಾರೆ.</p>.<p>‘ವಾರಕ್ಕೆ ಕನಿಷ್ಠ ಎರಡು ಸಲ ಡ್ರಿಪ್ ಮೂಲಕ ನೀರುಣಿಸಬೇಕು. ಎರಡು ಬೋರ್ವೆಲ್ಗಳು ಹೊಲದಲ್ಲಿ ಇದ್ದು, ನೀರಿನ ಕೊರತೆಯಾಗಿಲ್ಲ. ಇದರ ಜತೆಗೆ ದ್ರಾಕ್ಷಿ ಬೆಳೆಯನ್ನು ಮಾಡಿರುವುದರಿಂದ ಎರಡೂ ಬೆಳೆಗೆ ನೀರು ಸಾಕಾಗುತ್ತದೆ’ ಎಂದು ಕೋಣಶಿರಸಗಿ ಹೇಳಿದರು.</p>.<p>ಇಳುವರಿ: ‘ಪ್ರತಿ ಗಿಡವು ಕನಿಷ್ಠ ಎರಡರಿಂದ ಮೂರು ಕೆ.ಜಿ.ಯಷ್ಟು ಶತಾವರಿ ಬೇರು (ಒಣಗಿಸಿದ ಮೇಲೆ) ಕೊಡುತ್ತದೆ. ಒಂದು ಎಕರೆಗೆ ಕನಿಷ್ಠ ಏನಿಲ್ಲವೆಂದರೂ ಎಲ್ಲಾ ಖರ್ಚು ಕಳೆದು, ಒಂದೂವರೆ ವರ್ಷಕ್ಕೆ ₹ 5 ಲಕ್ಷ ಕೈಗೆ ಸಿಗಲಿದೆ ಎಂಬ ಲೆಕ್ಕಾಚಾರವನ್ನು ಕಂಪನಿಯೊಂದು ನೀಡಿದೆಯಂತೆ. ಹೊಲಕ್ಕೆ ಬಂದು ಬೆಳೆಯನ್ನು ಒಪ್ಪಂದ ಮಾಡಿಕೊಂಡ ಕಂಪನಿಯವರು ತೆಗೆದುಕೊಂಡು ಹೋಗುತ್ತಾರೆ.’</p>.<p>‘ಈ ಬೆಳೆಗೆ ಯಾವುದೇ ಕೀಟನಾಶಕ ಸಿಂಪಡಿಸುವ ಖರ್ಚು ಬರುವುದಿಲ್ಲ. ಲಾಗೋಡಿ ಕಡಿಮೆ. ಈ ಔಷಧಿ ಸಸ್ಯವನ್ನು ಮಹಾರಾಷ್ಟ್ರದಲ್ಲಿ ಹೆಚ್ಚು ರೈತರು ಬೆಳೆಯುತ್ತಿದ್ದಾರೆ. ನಮ್ಮಲ್ಲಿ ಅತ್ಯಂತ ವಿರಳ, ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದರಿಂದ ಕಡಿಮೆ ಭೂಮಿ ಇದ್ದಾಗಲೂ, ರೈತ ಹೆಚ್ಚು ಸಂಪಾದನೆ ಮಾಡಬಹುದು ಎಂಬ ಆತ್ಮವಿಶ್ವಾಸ’ ಅವರದ್ದು.</p>.<p><strong>ಪ್ರಯೋಗಗಳು ನಡೆಯಲಿ..!</strong></p>.<p>15 ಎಕರೆಯಲ್ಲಿ ಮೂರು ಎಕರೆ ದ್ರಾಕ್ಷಿ ಮಾಡಿದ್ದಾರೆ. ಉಳಿದ ಭೂಮಿಯಲ್ಲಿ ಸಾಂಪ್ರದಾಯಿಕ ಆಹಾರ ಬೆಳೆಗಳನ್ನು ಬೆಳೆಯುತ್ತಿರುವುದಾಗಿ ಹೇಳಿದ ರಾಜಕುಮಾರ, ‘ರೈತನಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಬೆಳೆ ಬೆಳೆಯುವ ಬಗ್ಗೆ ಹೇಳಿಕೊಡಬೇಕಿದೆ.’</p>.<p>‘ಬೇಸಿಗೆಯಲ್ಲಿ ಪಪ್ಪಾಯಿ, ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಬೆಳೆಗಳನ್ನು ಕಡಿಮೆ ಅವಧಿಯಲ್ಲಿ ಬೆಳೆಯಬಹುದು. ಮುಂದಿನ ಬೇಸಿಗೆಗೆ ಬರುವಂತೆ ಬೆಳೆಯುವ ಹಂಬಲವಿದೆ. ಕೃಷಿ ಬಗ್ಗೆ ಅಧ್ಯಯನ ಮಾಡಿಕೊಂಡು, ರೈತರು ಹೊಸ ಬೆಳೆಗಳನ್ನು ಈ ಭಾಗಕ್ಕೆ ತರಬೇಕಿದೆ. ಜತೆಗೆ ಅದನ್ನು ಎಲ್ಲರಿಗೂ ತಿಳಿಸುವ ಕೆಲಸ ನಡೆಸಬೇಕು’ ಎನ್ನುತ್ತಾರೆ ರಾಜಕುಮಾರ ಕೋಣಶಿರಸಗಿ.</p>.<p><strong>ಸಂಪರ್ಕ ಸಂಖ್ಯೆ: </strong>9845540876</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>