<p><strong>ಭಾಲ್ಕಿ: </strong>ರೈತರು ಕೇವಲ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯದೆ, ತೋಟಗಾರಿಕೆ ಹಾಗೂ ಬಹು ಬೆಳೆ ಪದ್ಧತಿ ಅನುಸರಿಸಬೇಕು. ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳಬೇಕು. ಆಗ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬಹುದು...</p>.<p>ಇದು ತಾಲ್ಲೂಕಿನ ಅಹಮದಾಬಾದ್ ಗ್ರಾಮದ ಪ್ರಗತಿಪರ ರೈತ ಸಂತೋಷ ಪಾಟೀಲ ಅವರ ಮಾತು.</p>.<p>ಅವರು ತಮಗಿರುವ ಆರು ಎಕರೆ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಮೂಲಕ ವಾರ್ಷಿಕವಾಗಿ ಕನಿಷ್ಠ ₹4 ಲಕ್ಷ ಆದಾಯ ಗಳಿಸುತ್ತ, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂದು ಸ್ವಾವಲಂಬಿ ಜೀವನ ನಡೆಸುತ್ತ ಇತರ ಅನ್ನದಾತರಿಗೆ ಮಾದರಿ ಆಗಿದ್ದಾರೆ.</p>.<p>‘ಸದ್ಯ 1 ಎಕರೆಯಲ್ಲಿ ಟೊಮೆಟೊ, ಮೂರು ಎಕರೆಯಲ್ಲಿ ಬೆಳೆದಿರುವ ಹಸಿ ಶುಂಠಿ ಕಟಾವಿಗೆ ಬಂದಿದೆ. ನೀರಿನ ಸಮಸ್ಯೆ ಬಗೆ ಹರಿಸಿಕೊಳ್ಳುಲು ಒಟ್ಟು ನಾಲ್ಕು ಕೊಳವೆ ಬಾವಿಗಳನ್ನು ಕೊರೆಯಿಸಿದ್ದೇನೆ. ಕಳೆದ ವರ್ಷ ಉತ್ತಮ ಮಳೆ ಆಗಿದ್ದರಿಂದ ಸದ್ಯ ಎಲ್ಲ ಕೊಳವೆ ಬಾವಿಗಳಲ್ಲೂ 2 ಇಂಚು ನೀರು ಇದೆ. ಕೊಳವೆ ಬಾವಿಯ ನೀರನ್ನು ತೆರೆದ ಬಾವಿಗೆ ಹರಿಬಿಟ್ಟು, ನಂತರ ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗಳಿಗೆ ನೀರುಣಿಸಿ, ನೀರಿನ ಮಿತ ಬಳಕೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ರೈತ ಸಂತೋಷ.</p>.<p>‘ಕಳೆದ ದೀಪಾವಳಿ ಸಂದರ್ಭದಲ್ಲಿ 2 ಎಕರೆ ಭೂಮಿಯಲ್ಲಿ ಚೆಂಡು ಹೂ ಬೆಳೆದು ₹4 ಲಕ್ಷ ಆದಾಯ ಗಳಿಸಿದ್ದೇನೆ. ಚೆಂಡು ಹೂ ಬೆಳೆಯಲು, ಕಟಾವು ಕೂಲಿ, ಮಾರುಕಟ್ಟೆ ಸಾಗಣೆ ಖರ್ಚು ಸೇರಿದಂತೆ ಒಟ್ಟು ₹2 ಲಕ್ಷ ಖರ್ಚಾದರೂ, ₹2 ಲಕ್ಷ ನಿವ್ವಳ ಆದಾಯ ಗಳಿಸಿದ್ದೇನೆ. ಸದ್ಯ ಮೂರು ತಿಂಗಳ ಬೆಳೆಯಾಗಿರುವ ಟೊಮೆಟೊಗೆ ಉತ್ತಮ ದರ ಸಿಕ್ಕಿಲ್ಲ. ಆದರೂ ₹30 ಸಾವಿರ ರೂಪಾಯಿ ಆದಾಯ ಗಳಿಸಿದ್ದೇನೆ. ಕಳೆದ ಜೂನ್ ತಿಂಗಳಿನಲ್ಲಿ 3 ಎಕರೆ ಭೂಮಿಯಲ್ಲಿ ನಾಟಿ ಮಾಡಿ ಹಸಿ ಶುಂಠಿಯನ್ನು ಸಮೃದ್ಧವಾಗಿ ಬೆಳೆದಿದ್ದೇನೆ. 10 ರಿಂದ 15 ದಿನದಲ್ಲಿ ಮಾರುಕಟ್ಟೆಗೆ ಸಾಗಿಸುವವನಿದ್ದೇನೆ. ಅಂದಾಜು 250 ರಿಂದ 300 ಕ್ವಿಂಟಲ್ ಬೆಳೆ ಆಗುವ ನಿರೀಕ್ಷೆ ಇದೆ. ಕ್ವಿಂಟಾಲ್ಗೆ ಕನಿಷ್ಠ ₹3 ಸಾವಿರ ಬೆಲೆ ಇದ್ದರೆ, ₹7.5 ಲಕ್ಷ ಆದಾಯ ಗಳಿಸುತ್ತೇನೆ. ₹4 ಲಕ್ಷ ಲಾಗೋಡಿ ತೆಗೆದರೂ ಏನಿಲ್ಲವೆಂದರೆ ₹3.5 ಲಕ್ಷ ನಿವ್ವಳ ಲಾಭ ಆಗುವ ನಿರೀಕ್ಷೆಯಲ್ಲಿ ಇದ್ದೇನೆ. ಒಟ್ಟಾರೆ ವಾರ್ಷಿಕವಾಗಿ ಎಲ್ಲ ಬೆಳೆಗಳಿಂದ ಕೃಷಿ ಸಂಬಂಧಿತ ಎಲ್ಲ ಖರ್ಚು ಹೊರತುಪಡಿಸಿ ಕನಿಷ್ಠ ₹4 ಲಕ್ಷ ಸಂಪಾದಿಸುತ್ತೇನೆ’ ಎಂದು ರೈತ ಸಂತೋಷ ಪಾಟೀಲ ಹೆಮ್ಮೆಯಿಂದ, ಸಂತೋಷದಿಂದ ತಿಳಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ: </strong>ರೈತರು ಕೇವಲ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯದೆ, ತೋಟಗಾರಿಕೆ ಹಾಗೂ ಬಹು ಬೆಳೆ ಪದ್ಧತಿ ಅನುಸರಿಸಬೇಕು. ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳಬೇಕು. ಆಗ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಳ್ಳಬಹುದು...</p>.<p>ಇದು ತಾಲ್ಲೂಕಿನ ಅಹಮದಾಬಾದ್ ಗ್ರಾಮದ ಪ್ರಗತಿಪರ ರೈತ ಸಂತೋಷ ಪಾಟೀಲ ಅವರ ಮಾತು.</p>.<p>ಅವರು ತಮಗಿರುವ ಆರು ಎಕರೆ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಮೂಲಕ ವಾರ್ಷಿಕವಾಗಿ ಕನಿಷ್ಠ ₹4 ಲಕ್ಷ ಆದಾಯ ಗಳಿಸುತ್ತ, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂದು ಸ್ವಾವಲಂಬಿ ಜೀವನ ನಡೆಸುತ್ತ ಇತರ ಅನ್ನದಾತರಿಗೆ ಮಾದರಿ ಆಗಿದ್ದಾರೆ.</p>.<p>‘ಸದ್ಯ 1 ಎಕರೆಯಲ್ಲಿ ಟೊಮೆಟೊ, ಮೂರು ಎಕರೆಯಲ್ಲಿ ಬೆಳೆದಿರುವ ಹಸಿ ಶುಂಠಿ ಕಟಾವಿಗೆ ಬಂದಿದೆ. ನೀರಿನ ಸಮಸ್ಯೆ ಬಗೆ ಹರಿಸಿಕೊಳ್ಳುಲು ಒಟ್ಟು ನಾಲ್ಕು ಕೊಳವೆ ಬಾವಿಗಳನ್ನು ಕೊರೆಯಿಸಿದ್ದೇನೆ. ಕಳೆದ ವರ್ಷ ಉತ್ತಮ ಮಳೆ ಆಗಿದ್ದರಿಂದ ಸದ್ಯ ಎಲ್ಲ ಕೊಳವೆ ಬಾವಿಗಳಲ್ಲೂ 2 ಇಂಚು ನೀರು ಇದೆ. ಕೊಳವೆ ಬಾವಿಯ ನೀರನ್ನು ತೆರೆದ ಬಾವಿಗೆ ಹರಿಬಿಟ್ಟು, ನಂತರ ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗಳಿಗೆ ನೀರುಣಿಸಿ, ನೀರಿನ ಮಿತ ಬಳಕೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ ರೈತ ಸಂತೋಷ.</p>.<p>‘ಕಳೆದ ದೀಪಾವಳಿ ಸಂದರ್ಭದಲ್ಲಿ 2 ಎಕರೆ ಭೂಮಿಯಲ್ಲಿ ಚೆಂಡು ಹೂ ಬೆಳೆದು ₹4 ಲಕ್ಷ ಆದಾಯ ಗಳಿಸಿದ್ದೇನೆ. ಚೆಂಡು ಹೂ ಬೆಳೆಯಲು, ಕಟಾವು ಕೂಲಿ, ಮಾರುಕಟ್ಟೆ ಸಾಗಣೆ ಖರ್ಚು ಸೇರಿದಂತೆ ಒಟ್ಟು ₹2 ಲಕ್ಷ ಖರ್ಚಾದರೂ, ₹2 ಲಕ್ಷ ನಿವ್ವಳ ಆದಾಯ ಗಳಿಸಿದ್ದೇನೆ. ಸದ್ಯ ಮೂರು ತಿಂಗಳ ಬೆಳೆಯಾಗಿರುವ ಟೊಮೆಟೊಗೆ ಉತ್ತಮ ದರ ಸಿಕ್ಕಿಲ್ಲ. ಆದರೂ ₹30 ಸಾವಿರ ರೂಪಾಯಿ ಆದಾಯ ಗಳಿಸಿದ್ದೇನೆ. ಕಳೆದ ಜೂನ್ ತಿಂಗಳಿನಲ್ಲಿ 3 ಎಕರೆ ಭೂಮಿಯಲ್ಲಿ ನಾಟಿ ಮಾಡಿ ಹಸಿ ಶುಂಠಿಯನ್ನು ಸಮೃದ್ಧವಾಗಿ ಬೆಳೆದಿದ್ದೇನೆ. 10 ರಿಂದ 15 ದಿನದಲ್ಲಿ ಮಾರುಕಟ್ಟೆಗೆ ಸಾಗಿಸುವವನಿದ್ದೇನೆ. ಅಂದಾಜು 250 ರಿಂದ 300 ಕ್ವಿಂಟಲ್ ಬೆಳೆ ಆಗುವ ನಿರೀಕ್ಷೆ ಇದೆ. ಕ್ವಿಂಟಾಲ್ಗೆ ಕನಿಷ್ಠ ₹3 ಸಾವಿರ ಬೆಲೆ ಇದ್ದರೆ, ₹7.5 ಲಕ್ಷ ಆದಾಯ ಗಳಿಸುತ್ತೇನೆ. ₹4 ಲಕ್ಷ ಲಾಗೋಡಿ ತೆಗೆದರೂ ಏನಿಲ್ಲವೆಂದರೆ ₹3.5 ಲಕ್ಷ ನಿವ್ವಳ ಲಾಭ ಆಗುವ ನಿರೀಕ್ಷೆಯಲ್ಲಿ ಇದ್ದೇನೆ. ಒಟ್ಟಾರೆ ವಾರ್ಷಿಕವಾಗಿ ಎಲ್ಲ ಬೆಳೆಗಳಿಂದ ಕೃಷಿ ಸಂಬಂಧಿತ ಎಲ್ಲ ಖರ್ಚು ಹೊರತುಪಡಿಸಿ ಕನಿಷ್ಠ ₹4 ಲಕ್ಷ ಸಂಪಾದಿಸುತ್ತೇನೆ’ ಎಂದು ರೈತ ಸಂತೋಷ ಪಾಟೀಲ ಹೆಮ್ಮೆಯಿಂದ, ಸಂತೋಷದಿಂದ ತಿಳಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>