‘ಸ್ವಂತ ಕೆಲಸ ಮಾಡಿಕೊಂಡರೆ ಭತ್ತಕ್ಕಿಂತ ಕಬ್ಬು ಲಾಭದಾಯಕ. ಎಲ್ಲದಕ್ಕೂ ಕೆಲಸಗಾರರನ್ನು ನಂಬಿಕೊಂಡರೆ ಖರ್ಚು ಮತ್ತು ಉತ್ಪನ್ನ ಸರಿದೂಗುತ್ತದೆ. ಈ ಬೆಳೆಗೆ ರೋಗ ಕಡಿಮೆ. ಔಷಧವೂ ಬೇಕಾಗದು. ರಾತ್ರಿ ಬರುವ ಮೊಲ, ಜಿಂಕೆ, ಹಂದಿ, ಹಗಲಿನಲ್ಲಿ ದಾಳಿಯಿಡುವ ಮಂಗಗಳಿಂದ ರಕ್ಷಿಸಿಕೊಳ್ಳಲು, ಸರಿಯಾದ ಬೇಲಿ ನಿರ್ಮಿಸಿಕೊಂಡರೆ, ಉತ್ತಮ ಫಸಲು ಕೈಗೆ ಸಿಗುತ್ತದೆ’ ಎಂಬುದು ಅವರ ಅಭಿಪ್ರಾಯ.