ಮಾ. 26ರ ‘ಕೃಷಿ ಕಣಜ’ದ ‘ಸುಲಭ ಉಪಾಯ’ ಅಂಕಣದಲ್ಲಿ ‘ಹಲಸಿನ ರಕ್ಷಣೆಗೆ ವಿವಿಧ ಉಪಾಯ’ ಕುರಿತು ಮಾಹಿತಿ ಪ್ರಕಟವಾಗಿತ್ತು. ಹಲಸಿನ ಮರಕ್ಕೆ ತಗಡು ಸುತ್ತುವುದು ಮತ್ತು ಕೊಂಬೆಗೆ ಡಬ್ಬ ತೂಗು ಹಾಕುವುದರಿಂದ ಕರಡಿಗಳಿಂದ ಹಣ್ಣುಗಳನ್ನು ರಕ್ಷಿಸಬಹುದು. ಡಬ್ಬ ಶಬ್ಧ ಮಾಡುವುದರಿಂದ, ಕರಡಿಗಳು ಓಡಿ ಹೋಗುತ್ತವೆ ಎಂದು ವಿವರಿಸಲಾಗಿತ್ತು. ಇದಕ್ಕೆ ಕೆಲ ಓದುಗರು ಪ್ರತಿಕ್ರಿಯಿಸಿ, ‘ಕರಡಿ ಮರ ಏರುವುದನ್ನು ತಪ್ಪಿಸಲು ಮರಕ್ಕೆ ತಗಡು ಸುತ್ತಿರುವುದು ಸರಿ. ಆದರೆ, ಡಬ್ಬ ನೇತು ಹಾಕಿರುವ ಉದ್ದೇಶವೇನು?’ ಎಂದು ಪ್ರಶ್ನಿಸಿದ್ದಾರೆ.