ಬೆಂಗಳೂರು:'ಕೊರೊನಾ ಕಾಡಿದ ಸಮಯ ಆಗಿದ್ದು - ಆಗಬೇಕಾದದ್ದು' ಈ ಕುರಿತು ಸರಣಿ ಚಿಂತನೆ ಮಾಲೆ ಇಂದಿನಿಂದ ಆರಂಭವಾಗಿದೆ.
'ಸೋಲಿಸ ಬ್ಯಾಡ, ಗೆಲಿಸಯ್ಯ' ಇಂದಿನ ಸಂವಾದದಲ್ಲಿ ಖ್ಯಾತ ರಂಗ ನಿರ್ದೇಶಕಿ, ಚಲನಚಿತ್ರ ನಟಿ, ಗಾಯಕಿ, ಪದ್ಮಶ್ರೀ ಪುರಸ್ಕೃತೆ ಹಾಗೂ ವಿಶ್ರಾಂತ ರಾಜಸಭೆ ಸದಸ್ಯೆ ಬಿ.ಜಯಶ್ರೀ ಅವರಿಂದ ರಂಗಭೂಮಿ ಸಂಕಷ್ಟದ ಕುರಿತು ಚಿಂತನೆ ನಡೆಯಲಿದೆ.
ಪ್ರಜಾವಾಣಿ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ನಲ್ಲಿ ಏಕಕಾಲಕ್ಕೆ ಸಂಜೆ 6ಕ್ಕೆ ಸರಿಯಾಗಿ ನೇರಪ್ರಸಾರವಾಗಲಿದೆ. ಸಂವಾದದಲ್ಲಿ ನೀವೂ ಪಾಲ್ಗೊಳ್ಳಿ.