<p>ನಾವೆಲ್ಲರೂ ಕೂಡ ಮೊದಲಿಗೆ ಒಳ್ಳೆಯವರಾಗಿಯೇ ಇರುತ್ತೇವೆ! ಇದು ಎಲ್ಲಿಯ ತನಕ? ನಮ್ಮಲ್ಲಿ ಹಣದ ರಾಶಿ ಸೇರದಿರುವಾಗ; ಅಧಿಕಾರದ ಪೀಠ ಇಲ್ಲದಿರುವಾಗ; ದೇಹವು ಬಲದ ಬೆಂಬಲವನ್ನು ಕಳೆದುಕೊಂಡಿರುವಾಗ. ಎಂದರೆ ನಮ್ಮಲ್ಲಿ ಸಂಪತ್ತು–ಶಕ್ತಿಗಳು ಇಲ್ಲದಿ ದ್ದಾಗ ಸುಮ್ಮನಿರುತ್ತೇವೆ; ಅವು ಸೇರಿಕೊಂಡಾಗ ಮಾತ್ರ ನಮ್ಮ ಪಿತ್ತ ನೆತ್ತಿಗೇರುತ್ತದೆ. ಇದನ್ನೇ ಸುಭಾಷಿತವೊಂದು ಹೀಗೆಂದಿದೆ:</p>.<p><strong>ಧನಿನೋsಪಿ ನಿರುನ್ಮಾದಾಃ ಯುವಾನೋsಪಿ ನ ಚಂಚಲಾಃ |<br />ಪ್ರಭವೋsಪ್ಯಪ್ರಮತ್ತಾಸ್ತೇ ಮಹಾಮಹಿಮಶಾಲಿನಃ ||</strong></p>.<p>ಇದರ ತಾತ್ಪರ್ಯ ಹೀಗೆ: ‘ಸತ್ಪುರುಷರು ಹೆಚ್ಚು ಮಹಿಮೆಯುಳ್ಳವರು. ಅವರು ಶ್ರೀಮಂತರಾಗಿದ್ದರೂ ಅವರಲ್ಲಿ ಮದ ಇರುವುದಿಲ್ಲ; ತಾರುಣ್ಯದಲ್ಲಿದ್ದರೂ ಅವರು ಚಪಲರಲ್ಲ; ಅಧಿಕಾರದಲ್ಲಿದ್ದರೂ ಅವರು ಎಚ್ಚರವನ್ನು ತಪ್ಪುವುದಿಲ್ಲ.’</p>.<p>ನಮ್ಮ ಹಲವು ಆಕರ್ಷಣೆಗಳು ದಿಕ್ಕನ್ನು ತಪ್ಪಿಸುತ್ತಿರುತ್ತವೆ. ಹಣ, ಅಧಿಕಾರ, ಯೌವನ, ರೂಪ – ಹೀಗೆ ಹಲವು ಸಂಗತಿಗಳು ನಮ್ಮ ಸ್ವಭಾವವನ್ನೇ ಬದಲಿಸಬಲ್ಲವು. ನಮ್ಮ ಜೇಬು ಖಾಲಿ ಇರುವಾಗ ಸ್ವಲ್ಪ ತಗ್ಗಿ ಬಗ್ಗಿ ನಡೆಯುತ್ತೇವೆ; ಜೇಬಿಗೆ ನಾಲ್ಕಾರು ನೋಟುಗಳು ಬಂದು ಬೀಳುತ್ತಿದ್ದಂತೆ ನಮ್ಮ ಗತ್ತು ಇದ್ದಕ್ಕಿಂದ್ದಂತೆ ಬದಲಾಗಿಬಿಡುತ್ತದೆ! ಅಂತೆಯೇ ಅಧಿಕಾರದ ಖುರ್ಚಿಯೂ ನಮ್ಮನ್ನು ತಲೆ ತಿರುಗುವಂತೆ ಮಾಡಿಬಿಡುತ್ತದೆ.</p>.<p>ಆದರೆ ಸಜ್ಜನಿಕೆ ಎನ್ನುವುದು ಯಾರ ದಿಟವಾದ ಸ್ವಭಾವವೋ ಅವರು ಎಂಥ ಸಮಯದಲ್ಲೂ ಒಂದೇ ರೀತಿಯಲ್ಲಿ ಇರುತ್ತಾರೆ. ಅವರಿಗೆ ಬಡತನವಿರಲಿ, ಸಿರಿತನವಿರಲಿ; ಅಧಿಕಾರದಲ್ಲಿರಲಿ, ಏಕಾಂತದಲ್ಲಿರಲಿ; ಆರೋಗ್ಯವಾಗಿರಲಿ, ಅನಾರೋಗ್ಯದಲ್ಲಿರಲಿ – ಅವರ ಅಂತಃಸತ್ವ ಮಾತ್ರ ಒಂದೇ ವಿಧದಲ್ಲಿ ಇರುತ್ತದೆ. ಸಿರಿ ಬಂದಾಗ ಅವರು ಕುಗ್ಗುವುದೂ ಇಲ್ಲ, ಸಿರಿ ಹೋದಾಗ ಹಿಗ್ಗುವುದೂ ಇಲ್ಲ. ಪ್ರೀತಿ, ಆತ್ಮೀಯತೆ, ಸಹನೆ, ಸಹಾನುಭೂತಿ, ಕರುಣೆ, ಮಾನವೀಯ ಮೌಲ್ಯ – ಇವು ಹೀಗೆ ಬಂದು ಹಾಗೆ ಹೋಗುವಂಥ ಗುಣಗಳು ಅಲ್ಲ. ಇವು ನಮ್ಮಲ್ಲಿ ನಿಜವಾಗಿಯೂ ಮನೆ ಮಾಡಿದ್ದರೆ, ಹೊರಗಿನ ಏರುಪೇರುಗಳು ಅವನ್ನು ಏನೂ ಬದಲಿಸಲಾರವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾವೆಲ್ಲರೂ ಕೂಡ ಮೊದಲಿಗೆ ಒಳ್ಳೆಯವರಾಗಿಯೇ ಇರುತ್ತೇವೆ! ಇದು ಎಲ್ಲಿಯ ತನಕ? ನಮ್ಮಲ್ಲಿ ಹಣದ ರಾಶಿ ಸೇರದಿರುವಾಗ; ಅಧಿಕಾರದ ಪೀಠ ಇಲ್ಲದಿರುವಾಗ; ದೇಹವು ಬಲದ ಬೆಂಬಲವನ್ನು ಕಳೆದುಕೊಂಡಿರುವಾಗ. ಎಂದರೆ ನಮ್ಮಲ್ಲಿ ಸಂಪತ್ತು–ಶಕ್ತಿಗಳು ಇಲ್ಲದಿ ದ್ದಾಗ ಸುಮ್ಮನಿರುತ್ತೇವೆ; ಅವು ಸೇರಿಕೊಂಡಾಗ ಮಾತ್ರ ನಮ್ಮ ಪಿತ್ತ ನೆತ್ತಿಗೇರುತ್ತದೆ. ಇದನ್ನೇ ಸುಭಾಷಿತವೊಂದು ಹೀಗೆಂದಿದೆ:</p>.<p><strong>ಧನಿನೋsಪಿ ನಿರುನ್ಮಾದಾಃ ಯುವಾನೋsಪಿ ನ ಚಂಚಲಾಃ |<br />ಪ್ರಭವೋsಪ್ಯಪ್ರಮತ್ತಾಸ್ತೇ ಮಹಾಮಹಿಮಶಾಲಿನಃ ||</strong></p>.<p>ಇದರ ತಾತ್ಪರ್ಯ ಹೀಗೆ: ‘ಸತ್ಪುರುಷರು ಹೆಚ್ಚು ಮಹಿಮೆಯುಳ್ಳವರು. ಅವರು ಶ್ರೀಮಂತರಾಗಿದ್ದರೂ ಅವರಲ್ಲಿ ಮದ ಇರುವುದಿಲ್ಲ; ತಾರುಣ್ಯದಲ್ಲಿದ್ದರೂ ಅವರು ಚಪಲರಲ್ಲ; ಅಧಿಕಾರದಲ್ಲಿದ್ದರೂ ಅವರು ಎಚ್ಚರವನ್ನು ತಪ್ಪುವುದಿಲ್ಲ.’</p>.<p>ನಮ್ಮ ಹಲವು ಆಕರ್ಷಣೆಗಳು ದಿಕ್ಕನ್ನು ತಪ್ಪಿಸುತ್ತಿರುತ್ತವೆ. ಹಣ, ಅಧಿಕಾರ, ಯೌವನ, ರೂಪ – ಹೀಗೆ ಹಲವು ಸಂಗತಿಗಳು ನಮ್ಮ ಸ್ವಭಾವವನ್ನೇ ಬದಲಿಸಬಲ್ಲವು. ನಮ್ಮ ಜೇಬು ಖಾಲಿ ಇರುವಾಗ ಸ್ವಲ್ಪ ತಗ್ಗಿ ಬಗ್ಗಿ ನಡೆಯುತ್ತೇವೆ; ಜೇಬಿಗೆ ನಾಲ್ಕಾರು ನೋಟುಗಳು ಬಂದು ಬೀಳುತ್ತಿದ್ದಂತೆ ನಮ್ಮ ಗತ್ತು ಇದ್ದಕ್ಕಿಂದ್ದಂತೆ ಬದಲಾಗಿಬಿಡುತ್ತದೆ! ಅಂತೆಯೇ ಅಧಿಕಾರದ ಖುರ್ಚಿಯೂ ನಮ್ಮನ್ನು ತಲೆ ತಿರುಗುವಂತೆ ಮಾಡಿಬಿಡುತ್ತದೆ.</p>.<p>ಆದರೆ ಸಜ್ಜನಿಕೆ ಎನ್ನುವುದು ಯಾರ ದಿಟವಾದ ಸ್ವಭಾವವೋ ಅವರು ಎಂಥ ಸಮಯದಲ್ಲೂ ಒಂದೇ ರೀತಿಯಲ್ಲಿ ಇರುತ್ತಾರೆ. ಅವರಿಗೆ ಬಡತನವಿರಲಿ, ಸಿರಿತನವಿರಲಿ; ಅಧಿಕಾರದಲ್ಲಿರಲಿ, ಏಕಾಂತದಲ್ಲಿರಲಿ; ಆರೋಗ್ಯವಾಗಿರಲಿ, ಅನಾರೋಗ್ಯದಲ್ಲಿರಲಿ – ಅವರ ಅಂತಃಸತ್ವ ಮಾತ್ರ ಒಂದೇ ವಿಧದಲ್ಲಿ ಇರುತ್ತದೆ. ಸಿರಿ ಬಂದಾಗ ಅವರು ಕುಗ್ಗುವುದೂ ಇಲ್ಲ, ಸಿರಿ ಹೋದಾಗ ಹಿಗ್ಗುವುದೂ ಇಲ್ಲ. ಪ್ರೀತಿ, ಆತ್ಮೀಯತೆ, ಸಹನೆ, ಸಹಾನುಭೂತಿ, ಕರುಣೆ, ಮಾನವೀಯ ಮೌಲ್ಯ – ಇವು ಹೀಗೆ ಬಂದು ಹಾಗೆ ಹೋಗುವಂಥ ಗುಣಗಳು ಅಲ್ಲ. ಇವು ನಮ್ಮಲ್ಲಿ ನಿಜವಾಗಿಯೂ ಮನೆ ಮಾಡಿದ್ದರೆ, ಹೊರಗಿನ ಏರುಪೇರುಗಳು ಅವನ್ನು ಏನೂ ಬದಲಿಸಲಾರವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>