<p>ಬೆಂಗಳೂರು–ಹುಲಿಯೂರುದುರ್ಗ ಹೆದ್ದಾರಿ ಬಳಿಯ ಗಿಡದಕೆಂಚನ ಹಳ್ಳಿಯಲ್ಲಿರುವ ಪಟ್ಲದಮ್ಮ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ಏಪ್ರಿಲ್ 9ರಿಂದ 16ರವರೆಗೆ 15ನೇ ವಾರ್ಷಿಕ ಜಾತ್ರೆ ನೆರವೇರಲಿದೆ.</p>.<p>ಪ್ರತಿ ವರ್ಷ ಉತ್ತರಾಯಣದ ಚೈತ್ರ ಮಾಸದಲ್ಲಿ ಶುಕ್ಲ ಚತುರ್ಥಿಯಂದು ಆರಂಭಗೊಳ್ಳುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗದ ಭಕ್ತಾದಿಗಳು ಆಗಮಿಸುತ್ತಾರೆ. ಏಪ್ರಿಲ್ 9 ರಂದು ಧ್ವಜಾರೋಹಣದೊಂದಿಗೆ ಜಾತ್ರೆ ಆರಂಭವಾಗಲಿದೆ. ಪ್ರತಿನಿತ್ಯ ಬೆಳಗಿನ ಜಾವದ ಪೂಜೆ, ಅಭಿಷೇಕ, ನಾಗದೇವತಾ ಮಂಟಪದಲ್ಲಿ ವಿಶೇಷ ಪೂಜೆ, ರಾತ್ರಿ ಉತ್ಸವ ಇರುತ್ತದೆ.</p>.<p>ಏ.13ರಂದು ಶ್ರೀರಾಮ ನವಮಿ ಆಚರಣೆ, 14ರಂದು ನಾಗದೇವತಾ ಮಂಟಪದಲ್ಲಿ ನಾಗರ ತನಿ ಎರೆಯುವುದು, ಮಹಾನೀರಾಜನ, 15ರಂದು ಸಂಜೆ ಕೆಂಚನಹಳ್ಳಿ, ಬಂದೀಗೌಡನಪಾಳ್ಯ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಂದ ಅರಮನೆ ಆರತಿ ನಡೆಯಲಿದೆ.</p>.<p>ಕೊನೆಯ ದಿನವಾದ 16ರಂದು ಬೆಳಿಗ್ಗೆ 8.30ಕ್ಕೆ ಗಂಗಾ ಪೂಜೆ, ಹೂವುಗೊಂಡದ ಪೂಜೆ, ಸುದರ್ಶನ ಹೋಮ, ಅಷ್ಟಾವಧಾನ ಸೇವೆ, ಸಂಜೆ ಉತ್ಸವಮೂರ್ತಿಗಳ ಪುರ ಮೆರವಣಿಗೆ, ರಾತ್ರಿ ಮುತ್ತಿನ ಪಲ್ಲಕಿ ಉತ್ಸವ ನಡೆಯಲಿದೆ.</p>.<p>ಪ್ರತಿ ವರ್ಷವೂ ಜಾತ್ರೆಯ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಿಂದ ನೂರಾರು ಭಕ್ತರು ಪಾದಯಾತ್ರೆಯಲ್ಲಿ ಕೆಂಚನಹಳ್ಳಿಗೆ ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.</p>.<p><strong>ಮಾರ್ಗ: </strong>ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಮೂಲಕ ಬಂದು ಚೌಡನಕುಪ್ಪೆಯಲ್ಲಿ ಇಳಿಯಬೇಕು. ಅಲ್ಲಿಂದ ಗಿಡದಕೆಂಚನಹಳ್ಳಿಗೆ ನಿಗದಿತ ವೇಳೆಯಲ್ಲಿ ಕೆಎಸ್ಆರ್ಟಿಸಿಯ ಬಸ್ ಸೌಕರ್ಯ ಇದೆ. ನಿಯಮಿತ ಆಟೊ ಸಂಚಾರವೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು–ಹುಲಿಯೂರುದುರ್ಗ ಹೆದ್ದಾರಿ ಬಳಿಯ ಗಿಡದಕೆಂಚನ ಹಳ್ಳಿಯಲ್ಲಿರುವ ಪಟ್ಲದಮ್ಮ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ಏಪ್ರಿಲ್ 9ರಿಂದ 16ರವರೆಗೆ 15ನೇ ವಾರ್ಷಿಕ ಜಾತ್ರೆ ನೆರವೇರಲಿದೆ.</p>.<p>ಪ್ರತಿ ವರ್ಷ ಉತ್ತರಾಯಣದ ಚೈತ್ರ ಮಾಸದಲ್ಲಿ ಶುಕ್ಲ ಚತುರ್ಥಿಯಂದು ಆರಂಭಗೊಳ್ಳುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗದ ಭಕ್ತಾದಿಗಳು ಆಗಮಿಸುತ್ತಾರೆ. ಏಪ್ರಿಲ್ 9 ರಂದು ಧ್ವಜಾರೋಹಣದೊಂದಿಗೆ ಜಾತ್ರೆ ಆರಂಭವಾಗಲಿದೆ. ಪ್ರತಿನಿತ್ಯ ಬೆಳಗಿನ ಜಾವದ ಪೂಜೆ, ಅಭಿಷೇಕ, ನಾಗದೇವತಾ ಮಂಟಪದಲ್ಲಿ ವಿಶೇಷ ಪೂಜೆ, ರಾತ್ರಿ ಉತ್ಸವ ಇರುತ್ತದೆ.</p>.<p>ಏ.13ರಂದು ಶ್ರೀರಾಮ ನವಮಿ ಆಚರಣೆ, 14ರಂದು ನಾಗದೇವತಾ ಮಂಟಪದಲ್ಲಿ ನಾಗರ ತನಿ ಎರೆಯುವುದು, ಮಹಾನೀರಾಜನ, 15ರಂದು ಸಂಜೆ ಕೆಂಚನಹಳ್ಳಿ, ಬಂದೀಗೌಡನಪಾಳ್ಯ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಂದ ಅರಮನೆ ಆರತಿ ನಡೆಯಲಿದೆ.</p>.<p>ಕೊನೆಯ ದಿನವಾದ 16ರಂದು ಬೆಳಿಗ್ಗೆ 8.30ಕ್ಕೆ ಗಂಗಾ ಪೂಜೆ, ಹೂವುಗೊಂಡದ ಪೂಜೆ, ಸುದರ್ಶನ ಹೋಮ, ಅಷ್ಟಾವಧಾನ ಸೇವೆ, ಸಂಜೆ ಉತ್ಸವಮೂರ್ತಿಗಳ ಪುರ ಮೆರವಣಿಗೆ, ರಾತ್ರಿ ಮುತ್ತಿನ ಪಲ್ಲಕಿ ಉತ್ಸವ ನಡೆಯಲಿದೆ.</p>.<p>ಪ್ರತಿ ವರ್ಷವೂ ಜಾತ್ರೆಯ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಿಂದ ನೂರಾರು ಭಕ್ತರು ಪಾದಯಾತ್ರೆಯಲ್ಲಿ ಕೆಂಚನಹಳ್ಳಿಗೆ ಆಗಮಿಸಿ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.</p>.<p><strong>ಮಾರ್ಗ: </strong>ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಮೂಲಕ ಬಂದು ಚೌಡನಕುಪ್ಪೆಯಲ್ಲಿ ಇಳಿಯಬೇಕು. ಅಲ್ಲಿಂದ ಗಿಡದಕೆಂಚನಹಳ್ಳಿಗೆ ನಿಗದಿತ ವೇಳೆಯಲ್ಲಿ ಕೆಎಸ್ಆರ್ಟಿಸಿಯ ಬಸ್ ಸೌಕರ್ಯ ಇದೆ. ನಿಯಮಿತ ಆಟೊ ಸಂಚಾರವೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>