<p>ಗರಿಗೆಡು</p>.<p>ಗರಿಗೆಡು (ಆಲಂ.) ಬಲಹೀನವಾಗು; ಶಕ್ತಿಗುಂದು</p>.<p>(ಗರಿ + ಕೆಡು)</p>.<p>ಸೇತುಬಂಧನ ಬೃಹದ್ದರ್ಶನವನ್ನು, ಆಗ ನಡೆದ ಅದ್ಭುತವನ್ನು ಯಾವ ಕವಿತಾನೆ ಬಣ್ಣಿಸಲು ಸಾಧ್ಯ? ಹಾಗೆ ವರ್ಣಿಸುವಾಗ ಅವನ ಮನಸ್ಸು ಬಲಹೀನವಾಗಿ ಸೋತು ಬಳಲುವುದಿಲ್ಲವೆ? ಎಂದು ಕುವೆಂಪು ಪ್ರಶ್ನಿಸಿದ್ದಾರೆ. ಕಲ್ಪನಾ ಶಕ್ತಿ ಕುಂದುವುದನ್ನು ‘ಗರಿಗೆಡು’ ಪದದಲ್ಲಿ ಆಲಂಕರಿಕವಾಗಿ ಪ್ರಯೋಗಿಸಿದ್ದಾರೆ.</p>.<p>ಮುಂದೆ ನಡೆದದ್ಭುತವನಾವ ಕವಿ ಬಣ್ಣಿಪನೊ?</p>.<p>ಜೋಲುತೆ ಬಳಲ್ದು ಗರಿಗೆಟ್ಟುದುರದೇ ಮನಂ ? </p>.<p>ಬುದ್ಧಿ ಭೈರವ</p>.<p>ಬುದ್ಧಿ(ನಾ).ತಿಳಿವಳಿಕೆ; ಅರಿವು</p>.<p>ಭೈರವ (ಗು). ಪರಮೇಶ್ವರನ ರೂಪಗಳಲ್ಲಿ ಒಂದು, ಭಯಂಕರವಾದ</p>.<p>ಕುವೆಂಪು ಅವರು ‘ಸ್ವಾಮಿ ವಿವೇಕಾನಂದ’ ಕವನದಲ್ಲಿ ಆ ವರ ಯೋಗಿಯನ್ನು ನವಯುಗಾಚಾರ್ಯ, ರಾಮಕೃಷ್ಣರ ಭೀಮಶಿಷ್ಯ, ವೀರ ವೇದಾಂತಿ, ಮೇರು ಸಂನ್ಯಾಸಿ ಮುಂತಾದ ವಿಶೇಷಣಗಳಿಂದ ವರ್ಣಿಸುತ್ತಾ ‘ಬುದ್ಧಿಭೈರವ’ ಎಂಬ ಪದ ನಿರ್ಮಿಸಿ ಕೀರ್ತಿಸಿದ್ದಾರೆ.</p>.<p>ಮನುಷ್ಯನಲ್ಲಿಯ ದುಷ್ಟತನದ ಕ್ಷುಲ್ಲಕ ಭಾವದ ನಡೆನುಡಿಯನ್ನು ನಾಶಗೈಯಲು ‘ಬುದ್ಧಿಭೈರವ’ ಅವಶ್ಯಕ. ಆ ಭೈರವನ ಬುದ್ಧಿಯ ತುಳಿತಕ್ಕೆ ಒಳಗಾದಾಗ ವ್ಯಕ್ತಿಯ ಹೃದಯದಲ್ಲಿ ಕ್ಷುದ್ರತನ ಇಲ್ಲವಾಗಿ ವಿವೇಕ ಉದಯಿಸುತ್ತದೆ. ಎಲ್ಲ ದುಷ್ಟ ಭಾವಗಳು ಬಸ್ಮವಾಗುತ್ತವೆ. ಅಲ್ಲಿ ‘ಬುದ್ಧಿ ಭೈರವ’ ಪ್ರತಿಷ್ಠಾಪಿತನಾಗುತ್ತಾನೆ. ಆ ಅರಿವಿನಲ್ಲಿ ವಿವೇಕಾನಂದರನ್ನು ಕ್ರಾಂತಿ ಪ್ರತೀಕವಾಗಿ ಕುವೆಂಪು ಅವರು ‘ಬುದ್ಧಿ ಭೈರವ’ ಎಂದು ಕರೆದಿದ್ದಾರೆ.</p>.<p>ರುದ್ರನರ್ತನವೆಸಗು ಹೃದಯದಿ, ಬುದ್ಧಿ ಭೈರವನೆ;</p>.<p>ರುದ್ರಭುಮಿಯಾಗಲೆಮ್ಮಿ ಕ್ಷುದ್ರ ಹೃದಯಗಳು!’ (ಸ್ವಾಮಿ ವಿವೇಕಾನಂದ – ಅಗ್ನಿಹಂಸ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗರಿಗೆಡು</p>.<p>ಗರಿಗೆಡು (ಆಲಂ.) ಬಲಹೀನವಾಗು; ಶಕ್ತಿಗುಂದು</p>.<p>(ಗರಿ + ಕೆಡು)</p>.<p>ಸೇತುಬಂಧನ ಬೃಹದ್ದರ್ಶನವನ್ನು, ಆಗ ನಡೆದ ಅದ್ಭುತವನ್ನು ಯಾವ ಕವಿತಾನೆ ಬಣ್ಣಿಸಲು ಸಾಧ್ಯ? ಹಾಗೆ ವರ್ಣಿಸುವಾಗ ಅವನ ಮನಸ್ಸು ಬಲಹೀನವಾಗಿ ಸೋತು ಬಳಲುವುದಿಲ್ಲವೆ? ಎಂದು ಕುವೆಂಪು ಪ್ರಶ್ನಿಸಿದ್ದಾರೆ. ಕಲ್ಪನಾ ಶಕ್ತಿ ಕುಂದುವುದನ್ನು ‘ಗರಿಗೆಡು’ ಪದದಲ್ಲಿ ಆಲಂಕರಿಕವಾಗಿ ಪ್ರಯೋಗಿಸಿದ್ದಾರೆ.</p>.<p>ಮುಂದೆ ನಡೆದದ್ಭುತವನಾವ ಕವಿ ಬಣ್ಣಿಪನೊ?</p>.<p>ಜೋಲುತೆ ಬಳಲ್ದು ಗರಿಗೆಟ್ಟುದುರದೇ ಮನಂ ? </p>.<p>ಬುದ್ಧಿ ಭೈರವ</p>.<p>ಬುದ್ಧಿ(ನಾ).ತಿಳಿವಳಿಕೆ; ಅರಿವು</p>.<p>ಭೈರವ (ಗು). ಪರಮೇಶ್ವರನ ರೂಪಗಳಲ್ಲಿ ಒಂದು, ಭಯಂಕರವಾದ</p>.<p>ಕುವೆಂಪು ಅವರು ‘ಸ್ವಾಮಿ ವಿವೇಕಾನಂದ’ ಕವನದಲ್ಲಿ ಆ ವರ ಯೋಗಿಯನ್ನು ನವಯುಗಾಚಾರ್ಯ, ರಾಮಕೃಷ್ಣರ ಭೀಮಶಿಷ್ಯ, ವೀರ ವೇದಾಂತಿ, ಮೇರು ಸಂನ್ಯಾಸಿ ಮುಂತಾದ ವಿಶೇಷಣಗಳಿಂದ ವರ್ಣಿಸುತ್ತಾ ‘ಬುದ್ಧಿಭೈರವ’ ಎಂಬ ಪದ ನಿರ್ಮಿಸಿ ಕೀರ್ತಿಸಿದ್ದಾರೆ.</p>.<p>ಮನುಷ್ಯನಲ್ಲಿಯ ದುಷ್ಟತನದ ಕ್ಷುಲ್ಲಕ ಭಾವದ ನಡೆನುಡಿಯನ್ನು ನಾಶಗೈಯಲು ‘ಬುದ್ಧಿಭೈರವ’ ಅವಶ್ಯಕ. ಆ ಭೈರವನ ಬುದ್ಧಿಯ ತುಳಿತಕ್ಕೆ ಒಳಗಾದಾಗ ವ್ಯಕ್ತಿಯ ಹೃದಯದಲ್ಲಿ ಕ್ಷುದ್ರತನ ಇಲ್ಲವಾಗಿ ವಿವೇಕ ಉದಯಿಸುತ್ತದೆ. ಎಲ್ಲ ದುಷ್ಟ ಭಾವಗಳು ಬಸ್ಮವಾಗುತ್ತವೆ. ಅಲ್ಲಿ ‘ಬುದ್ಧಿ ಭೈರವ’ ಪ್ರತಿಷ್ಠಾಪಿತನಾಗುತ್ತಾನೆ. ಆ ಅರಿವಿನಲ್ಲಿ ವಿವೇಕಾನಂದರನ್ನು ಕ್ರಾಂತಿ ಪ್ರತೀಕವಾಗಿ ಕುವೆಂಪು ಅವರು ‘ಬುದ್ಧಿ ಭೈರವ’ ಎಂದು ಕರೆದಿದ್ದಾರೆ.</p>.<p>ರುದ್ರನರ್ತನವೆಸಗು ಹೃದಯದಿ, ಬುದ್ಧಿ ಭೈರವನೆ;</p>.<p>ರುದ್ರಭುಮಿಯಾಗಲೆಮ್ಮಿ ಕ್ಷುದ್ರ ಹೃದಯಗಳು!’ (ಸ್ವಾಮಿ ವಿವೇಕಾನಂದ – ಅಗ್ನಿಹಂಸ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>