ಬಯಲುಸೀಮೆಯಲ್ಲಿ ಅಪರೂಪವಾಗಿರುವ ಬೆಳೆ ಬೆಳೆಯುವುದರಲ್ಲಿ ಅವರಿಗೆ ವಿಶೇಷ ಆಸಕ್ತಿ. ಕಲಬುರಗಿ, ಹಗರಿಬೊಮ್ಮನಹಳ್ಳಿ ಮುಂತಾದೆಡೆ ತರಬೇತಿ ಪಡೆದು ಪ್ರಾಯೋಗಿಕವಾಗಿ 24 ಗುಂಟೆ ಜಮೀನಿನಲ್ಲಿ ತೈವಾನ್ ಸೀಬೆ ಸಸಿಗಳನ್ನು ನೆಟ್ಟರು. ಬಳಿಕ ಕೋಲ್ಕತ್ತದಿಂದ ಸಸಿಗಳನ್ನು ತಂದು ಇನ್ನೂ ಒಂದು ಎಕರೆಗೆ ಕೃಷಿ ವಿಸ್ತರಿಸಿದರು. ಇದಕ್ಕಾಗಿ ವ್ಯಯಿಸಿದ ಬಂಡವಾಳ ಕೇವಲ 1.5 ಲಕ್ಷ. ಲಾಕ್ಡೌನ್ ಸಮಯದಲ್ಲೂ ₹ 26 ಲಕ್ಷಕ್ಕೂ ಹೆಚ್ಚು ಆದಾಯಗಳಿಸಿದ ಖುಷಿ ಅವರದು. ಕೃಷಿ ಎಂದಾಕ್ಷಣ ಮೂಗು ಮುರಿಯುವ ಯುವಜನರಿಗೆ ಅವರ ಬದುಕು ಮಾದರಿ ಎಂದರೆ ಅತಿಶಯೋಕ್ತಿಯಲ್ಲ.