<p>ದೇಶ ಭಾಷೆಗಳ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೆಲ್ಲಾ ಆಯಾ ಭಾಷೆಗಳಲ್ಲಿಯೇ ಜ್ಞಾನ ಸೃಷ್ಟಿಯ ಅಗತ್ಯದ ಕುರಿತ ಅನೇಕ ಮಾತುಗಳನ್ನು ನಾವೆಲ್ಲಾ ಮತ್ತೆ ಮತ್ತೆ ಕೇಳಿದ್ದೇವೆ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಈ ಕ್ಷೇತ್ರದಲ್ಲಿ ನಡೆದಷ್ಟು ಕೆಲಸಗಳು ಮತ್ತೆ ನಡೆಯಲಿಲ್ಲ. <br /> ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಜ್ಞಾನ ಸೃಷ್ಟಿ ಎಂಬುದು ಕೇವಲ ಸಾಹಿತ್ಯಕ್ಕೆ ಸೀಮಿತವಾದ ಕೆಲಸವಾಗಿಬಿಟ್ಟಿತು. ಅದನ್ನು ಮೀರಿದ್ದೇನಾದರೂ ಸ್ವಲ್ಪ ನಡೆದಿದ್ದರೆ ಅದು ಜಾನಪದ ಸಂಶೋಧನಾ ಕ್ಷೇತ್ರದಲ್ಲಿ. ಸಾಹಿತ್ಯ ಮತ್ತು ಸಂಸ್ಕೃತಿಗಳಷ್ಟೇ ಸುಲಭವಾಗಿ ಕನ್ನಡದಲ್ಲಿ ಅಭಿವ್ಯಕ್ತಿಸಲು, ಚರ್ಚಿಸಲು ಸಾಧ್ಯವಿರುವ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ `ಜ್ಞಾನ ಸೃಷ್ಟಿ~ ಎಂಬ ಪರಿಕಲ್ಪನೆ ಇನ್ನೂ ವಾಸ್ತವವಾಗಿಲ್ಲ. <br /> <br /> ಮಾಹಿತಿ ತಂತ್ರಜ್ಞಾನದ ಪರಿಣಾಮವಾಗಿ ಇಂಗ್ಲಿಷ್ ಭಾಷೆಯ ಜಾಗತೀಕರಣ ಪ್ರಕ್ರಿಯೆಗೆ ಚಾಲನೆ ದೊರೆತ ಮೇಲೆ ಇಂಗ್ಲಿಷ್ ಎಂಬುದು ಅಕಡೆಮಿಕ್ ವಲಯದ ಅಧಿಕೃತ `ಸಾಮಾನ್ಯ ಭಾಷೆ~ಯಾಗಿ ಪರಿವರ್ತನೆಗೊಂಡಿತು. ಈ ಪಲ್ಲಟವನ್ನು ಎದುರಿಸುವುದಕ್ಕೆ ಪ್ರಪಂಚಾದ್ಯಂತ ಇಂಗ್ಲಿಷೇತರ ಭಾಷೆಗಳು ಹಲವು ಇನ್ನೂ ತಿಣುಕಾಡುತ್ತಲೇ ಇವೆ.<br /> <br /> ಈ ಹಿನ್ನೆಲೆಯಲ್ಲಿ `ಸಂಶೋಧನೆ~ ಎಂಬ ಪರಿಕಲ್ಪನೆಯನ್ನು ಕನ್ನಡದಲ್ಲಿಯೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂಥ ಕೃತಿಯೊಂದನ್ನು ರಚಿಸಿರುವ ಎಂ.ಚಂದ್ರ ಪೂಜಾರಿಯವರ ಪ್ರಯತ್ನವನ್ನು ಒಂದು ಬಗೆಯಲ್ಲಿ `ಇಂಗ್ಲಿಷ್ನ ಜಾಗತೀಕರಣ~ಕ್ಕೆ ಬಂದ ಪ್ರತಿಕ್ರಿಯೆಯಾಗಿ ನೋಡಬಹುದು.<br /> <br /> ಕನ್ನಡ ವಿಶ್ವವಿದ್ಯಾಲಯವೂ ಸೇರಿದಂತೆ ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ `ಸಂಶೋಧನೆ~ಗಳನ್ನು ದೃಷ್ಟಿಯಲ್ಲಿಟ್ಟುಕೊಂಡೂ ಈ ಕೃತಿಯ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅಕಡೆಮಿಕ್ ಸಂಶೋಧನೆ ಎಂಬುದು ಅರಿವನ್ನು ಹುಡುಕುವ, ಇರುವ ಅರಿವನ್ನು ಸುಧಾರಿಸುವ ಅಥವಾ ಹೊಸ ಸಂದರ್ಭದಲ್ಲಿ ಅರಿವನ್ನು ಗ್ರಹಿಸುವ ವಿಧಾನವಷ್ಟೇ ಆಗಿ ಉಳಿದಿಲ್ಲ.<br /> <br /> ಅದೊಂದು ಪದವಿಯನ್ನು ಪಡೆಯುವ ಮಾರ್ಗವೂ ಆಗಿದೆ. ಈ ಪದವಿ ನಿರ್ದಿಷ್ಟ ಹುದ್ದೆಗಳಿಗೆ ಬೇಕಾದ ಅರ್ಹತೆಯನ್ನು ಸಂಪಾದಿಸುವ, ಬಡ್ತಿಗೆ ಬೇಕಾದ ಅರ್ಹತೆಯನ್ನುಗಳಿಸುವ ಮಾರ್ಗವೂ ಆಗಿದೆ. ಅಂದರೆ ಸಂಶೋಧನೆಯನ್ನು ಕೈಗೊಳ್ಳುವವನ ಮುಂದೆ ಇರುವ ಗುರಿ ಕೇವಲ ಅರಿವಿನ ವಿಸ್ತಾರವಷ್ಟೇ ಆಗಿರುವುದಿಲ್ಲ. <br /> <br /> ಇದೊಂದು ಕೊರತೆಯೋ ಅಥವಾ ಮಿತಿಯೋ ಆಗಬೇಕಾಗಿರಲಿಲ್ಲ. ಆದರೆ ಭಾರತೀಯ ಸಂದರ್ಭದಲ್ಲಿ ಆಗಬಾರದ್ದು ಆಗುವುದಕ್ಕೆ ಹೆಚ್ಚಿನ ಕಾರಣಗಳೇನೂ ಬೇಕಾಗುವುದಿಲ್ಲ ಎಂಬುದಕ್ಕೆ ಸಂಶೋಧನಾ ಕ್ಷೇತ್ರವೂ ಒಂದು ಉದಾಹರಣೆ.<br /> <br /> ಒಂದು ನಿರ್ದಿಷ್ಟ ವಿಷಯದ ಕುರಿತಂತೆ ಒಂದಷ್ಟು ಮಾಹಿತಿ ಸಂಗ್ರಹಿಸಿ ಒಂದು ಪುಸ್ತಕ ಬರೆಯುವುದಕ್ಕೂ ಎಂ.ಫಿಲ್, ಪಿಎಚ್.ಡಿ ಅಥವಾ ಡಿ.ಲಿಟ್ನ ಭಾಗವಾಗಿ ಸಂಶೋಧನಾ ಪ್ರಬಂಧವೊಂದನ್ನು ರಚಿಸುವುದಕ್ಕೂ ಬಹಳ ವ್ಯತ್ಯಾಸಗಳಿವೆ. ಈ ಪರಿಕಲ್ಪನಾತ್ಮಕ ವ್ಯತ್ಯಾಸವನ್ನು ಅದರ ಎಲ್ಲಾ ಸಂಕೀರ್ಣತೆಗಳೊಂದಿಗೆ ಕನ್ನಡದಲ್ಲೇ ವಿವರಿಸಲು ಚಂದ್ರಪೂಜಾರಿ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.<br /> <br /> ಅವರ ಕೆಲಸ ಕೇವಲ ಪರಿಕಲ್ಪನೆಯನ್ನು ವಿವರಿಸುವುದಕ್ಕಷ್ಟೇ ಸೀಮಿತವಾಗಿಲ್ಲ ಎಂಬುದು ಇಲ್ಲಿ ಬಹಳ ಮುಖ್ಯ. ಸಂಶೋಧನೆಯೆಂದರೆ ಕೇವಲ ಒಂದು ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟಿನೊಳಗೆ ನಿರ್ದಿಷ್ಟ ವಿಧಾನದ ಮೂಲಕ ನಿರ್ದಿಷ್ಟ ಸಮಸ್ಯೆಯೊಂದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಷ್ಟೇ ಆಗಿ ಉಳಿಯುವುದಿಲ್ಲ. <br /> <br /> ಏಕೆಂದರೆ ಇಲ್ಲಿ ಆರಿಸಿಕೊಳ್ಳುವ ಸಮಸ್ಯೆ, ಅದನ್ನು ಗ್ರಹಿಸಲು ಬಳಸುವ ಸೈದ್ಧಾಂತಿಕ ಚೌಕಟ್ಟು ಮತ್ತು ವಿಶ್ಲೇಷಣೆಗೆ ಬಳಕೆಯಾಗುವ ವಿಧಾನಗಳು ಒಟ್ಟು ಸಾಮಾಜಿಕ, ರಾಜಕೀಯ ಒಲವುಗಳಿಂದ ಮುಕ್ತವಾಗಿರುವ ನಿರಪೇಕ್ಷ ಸಂಗತಿಯಲ್ಲ.<br /> <br /> ಆದ್ದರಿಂದ ಸಂಶೋಧನೆಯೆಂದರೆ ಒಂದು ರಾಜಕೀಯ ನಿಲುವಿನ ನಿರೂಪಣೆಯೂ ಆಗಬಹುದು. ಇಂಥದ್ದೊಂದು ಸಂದರ್ಭದಲ್ಲಿ ಸಂಶೋಧಕನ ಆಯ್ಕೆ ಯಾವುದು? ಈ ಬಹಳ ಸಂಕೀರ್ಣವಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ದಿಕ್ಕಿನಲ್ಲಿ ಚಂದ್ರಪೂಜಾರಿಯವರ ಕೃತಿ ಬಹಳ ಮಹತ್ವದ್ದಾಗಿದೆ.<br /> <br /> ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವನ್ನು `ಸಮಸ್ಯೀಕರಿಸುವ~ ಕುರಿತಂತೆ ಚರ್ಚಿಸುವ ಅಧ್ಯಾಯದಲ್ಲಿ ಚಂದ್ರ ಪೂಜಾರಿಯವರು ಆಯ್ದುಕೊಂಡಿರುವ ಉದಾಹರಣೆಗಳು ಅವರ ಚಿಂತನೆಯ ದಿಕ್ಕನ್ನು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ ಆಯ್ಕೆಯನ್ನು ಸೂಚಿಸುತ್ತವೆ. <br /> <br /> ಪ್ರತ್ಯೇಕ ಕೊಡಗಿನ ಬೇಡಿಕೆಯ ಉದಾಹರಣೆಯನ್ನು ತೆಗೆದುಕೊಂಡು ಅದನ್ನು ಸಮಸ್ಯೀಕರಿಸಲು ಯತ್ನಿಸುವ ಲೇಖಕರು `ಕೊಡಗರು ಮಾತ್ರ ಕೊಡಗಿನ ಮೂಲನಿವಾಸಿಗಳೇ? ಇತರ ಜಾತಿ ಜನರು ಅಲ್ಲಿನ ಮೂಲ ನಿವಾಸಿಗಳಲ್ಲವೇ? ತಾವು ಮಾತ್ರ ಅಲ್ಲಿನ ಮೂಲ ನಿವಾಸಿಗಳೆಂದು ಕೊಡವರು ಘೋಷಣೆ ಮಾಡಿ ಕೊಡಗಿನ ಪ್ರತ್ಯೇಕತೆಯನ್ನು ಬಯಸಿದರೆ ಉಳಿದ ಸಮುದಾಯಗಳ ಸ್ಥಿತಿ ಏನಾಗುತ್ತದೆ?~ ಎಂಬ ಪ್ರಶ್ನೆಗಳಿಗೆ ತಲುಪುತ್ತಾರೆ.<br /> <br /> ಈ ಪ್ರಶ್ನೆಗಳಿಗೆ ತಲುಪುವ ಹಾದಿಯಲ್ಲಿ ವಿವರಿಸಲಾಗಿರುವ `ಕಲ್ಪಿತ ಸತ್ಯ~, `ರಚಿತ ಸತ್ಯ~ ಎಂಬ ಪರಿಕಲ್ಪನೆಗಳು ಹೇಗೆ ಸಮಸ್ಯೀಕರಣವನ್ನು ಪ್ರಭಾವಿಸಬಹುದು ಎಂಬುದರ ಕುರಿತು ಚರ್ಚೆಯ ಅಗತ್ಯವಿತ್ತು ಎನಿಸುತ್ತದೆ.<br /> <br /> ವಿಷಯಗಳನ್ನು ಮಂಡಿಸುವ ಕ್ರಮ ಮತ್ತು ವಿಧಾನವೂ ಒಂದು ಸಂವಾದದ ಸ್ವರೂಪದಲ್ಲಿದೆ. ಪ್ರಶ್ನೆಗಳನ್ನು ಎತ್ತುತ್ತಾ ಅದಕ್ಕೆ ಉತ್ತರಗಳನ್ನು ಹುಡುಕುತ್ತಾ ಸಾಗುವ ಈ ಕ್ರಿಯೆ ಆಸಕ್ತ ಸಾಮಾನ್ಯ ಓದುಗನಿಗೂ ಅಪ್ಯಾಯಮಾನವಾಗುತ್ತದೆ. ಪರಿಣಾಮವಾಗಿ ಅತ್ಯಂತ ತಾಂತ್ರಿಕ ಎನಿಸಬಹುದಾದ ವಿವರಗಳೂ ಕೂಡಾ ಸರಳವಾಗಿ ಓದುಗನ ಮನಸ್ಸಿನೊಳಕ್ಕೆ ಇಳಿಯುತ್ತವೆ. <br /> <br /> ಅಷ್ಟೇಕೆ ಯಾವುದಾದರೂ ನಿರ್ದಿಷ್ಟ ಪರಿಕಲ್ಪನೆಯೊಂದರ ಕುರಿತ ಉಲ್ಲೇಖವಿದ್ದರೆ ಅದರ ಕುರಿತ ಹೆಚ್ಚಿನ ಮಾಹಿತಿಗೆ ಅಗತ್ಯವಿರುವ ಪುಸ್ತಕ ಅಥವಾ ಸಂಪ್ರಬಂಧದ ವಿವರಗಳೂ ಆಯಾ ಅಧ್ಯಾಯಗಳ ಕೊನೆಯಲ್ಲಿಯೇ ಇವೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶ ಭಾಷೆಗಳ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೆಲ್ಲಾ ಆಯಾ ಭಾಷೆಗಳಲ್ಲಿಯೇ ಜ್ಞಾನ ಸೃಷ್ಟಿಯ ಅಗತ್ಯದ ಕುರಿತ ಅನೇಕ ಮಾತುಗಳನ್ನು ನಾವೆಲ್ಲಾ ಮತ್ತೆ ಮತ್ತೆ ಕೇಳಿದ್ದೇವೆ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಈ ಕ್ಷೇತ್ರದಲ್ಲಿ ನಡೆದಷ್ಟು ಕೆಲಸಗಳು ಮತ್ತೆ ನಡೆಯಲಿಲ್ಲ. <br /> ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಜ್ಞಾನ ಸೃಷ್ಟಿ ಎಂಬುದು ಕೇವಲ ಸಾಹಿತ್ಯಕ್ಕೆ ಸೀಮಿತವಾದ ಕೆಲಸವಾಗಿಬಿಟ್ಟಿತು. ಅದನ್ನು ಮೀರಿದ್ದೇನಾದರೂ ಸ್ವಲ್ಪ ನಡೆದಿದ್ದರೆ ಅದು ಜಾನಪದ ಸಂಶೋಧನಾ ಕ್ಷೇತ್ರದಲ್ಲಿ. ಸಾಹಿತ್ಯ ಮತ್ತು ಸಂಸ್ಕೃತಿಗಳಷ್ಟೇ ಸುಲಭವಾಗಿ ಕನ್ನಡದಲ್ಲಿ ಅಭಿವ್ಯಕ್ತಿಸಲು, ಚರ್ಚಿಸಲು ಸಾಧ್ಯವಿರುವ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ `ಜ್ಞಾನ ಸೃಷ್ಟಿ~ ಎಂಬ ಪರಿಕಲ್ಪನೆ ಇನ್ನೂ ವಾಸ್ತವವಾಗಿಲ್ಲ. <br /> <br /> ಮಾಹಿತಿ ತಂತ್ರಜ್ಞಾನದ ಪರಿಣಾಮವಾಗಿ ಇಂಗ್ಲಿಷ್ ಭಾಷೆಯ ಜಾಗತೀಕರಣ ಪ್ರಕ್ರಿಯೆಗೆ ಚಾಲನೆ ದೊರೆತ ಮೇಲೆ ಇಂಗ್ಲಿಷ್ ಎಂಬುದು ಅಕಡೆಮಿಕ್ ವಲಯದ ಅಧಿಕೃತ `ಸಾಮಾನ್ಯ ಭಾಷೆ~ಯಾಗಿ ಪರಿವರ್ತನೆಗೊಂಡಿತು. ಈ ಪಲ್ಲಟವನ್ನು ಎದುರಿಸುವುದಕ್ಕೆ ಪ್ರಪಂಚಾದ್ಯಂತ ಇಂಗ್ಲಿಷೇತರ ಭಾಷೆಗಳು ಹಲವು ಇನ್ನೂ ತಿಣುಕಾಡುತ್ತಲೇ ಇವೆ.<br /> <br /> ಈ ಹಿನ್ನೆಲೆಯಲ್ಲಿ `ಸಂಶೋಧನೆ~ ಎಂಬ ಪರಿಕಲ್ಪನೆಯನ್ನು ಕನ್ನಡದಲ್ಲಿಯೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂಥ ಕೃತಿಯೊಂದನ್ನು ರಚಿಸಿರುವ ಎಂ.ಚಂದ್ರ ಪೂಜಾರಿಯವರ ಪ್ರಯತ್ನವನ್ನು ಒಂದು ಬಗೆಯಲ್ಲಿ `ಇಂಗ್ಲಿಷ್ನ ಜಾಗತೀಕರಣ~ಕ್ಕೆ ಬಂದ ಪ್ರತಿಕ್ರಿಯೆಯಾಗಿ ನೋಡಬಹುದು.<br /> <br /> ಕನ್ನಡ ವಿಶ್ವವಿದ್ಯಾಲಯವೂ ಸೇರಿದಂತೆ ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ `ಸಂಶೋಧನೆ~ಗಳನ್ನು ದೃಷ್ಟಿಯಲ್ಲಿಟ್ಟುಕೊಂಡೂ ಈ ಕೃತಿಯ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅಕಡೆಮಿಕ್ ಸಂಶೋಧನೆ ಎಂಬುದು ಅರಿವನ್ನು ಹುಡುಕುವ, ಇರುವ ಅರಿವನ್ನು ಸುಧಾರಿಸುವ ಅಥವಾ ಹೊಸ ಸಂದರ್ಭದಲ್ಲಿ ಅರಿವನ್ನು ಗ್ರಹಿಸುವ ವಿಧಾನವಷ್ಟೇ ಆಗಿ ಉಳಿದಿಲ್ಲ.<br /> <br /> ಅದೊಂದು ಪದವಿಯನ್ನು ಪಡೆಯುವ ಮಾರ್ಗವೂ ಆಗಿದೆ. ಈ ಪದವಿ ನಿರ್ದಿಷ್ಟ ಹುದ್ದೆಗಳಿಗೆ ಬೇಕಾದ ಅರ್ಹತೆಯನ್ನು ಸಂಪಾದಿಸುವ, ಬಡ್ತಿಗೆ ಬೇಕಾದ ಅರ್ಹತೆಯನ್ನುಗಳಿಸುವ ಮಾರ್ಗವೂ ಆಗಿದೆ. ಅಂದರೆ ಸಂಶೋಧನೆಯನ್ನು ಕೈಗೊಳ್ಳುವವನ ಮುಂದೆ ಇರುವ ಗುರಿ ಕೇವಲ ಅರಿವಿನ ವಿಸ್ತಾರವಷ್ಟೇ ಆಗಿರುವುದಿಲ್ಲ. <br /> <br /> ಇದೊಂದು ಕೊರತೆಯೋ ಅಥವಾ ಮಿತಿಯೋ ಆಗಬೇಕಾಗಿರಲಿಲ್ಲ. ಆದರೆ ಭಾರತೀಯ ಸಂದರ್ಭದಲ್ಲಿ ಆಗಬಾರದ್ದು ಆಗುವುದಕ್ಕೆ ಹೆಚ್ಚಿನ ಕಾರಣಗಳೇನೂ ಬೇಕಾಗುವುದಿಲ್ಲ ಎಂಬುದಕ್ಕೆ ಸಂಶೋಧನಾ ಕ್ಷೇತ್ರವೂ ಒಂದು ಉದಾಹರಣೆ.<br /> <br /> ಒಂದು ನಿರ್ದಿಷ್ಟ ವಿಷಯದ ಕುರಿತಂತೆ ಒಂದಷ್ಟು ಮಾಹಿತಿ ಸಂಗ್ರಹಿಸಿ ಒಂದು ಪುಸ್ತಕ ಬರೆಯುವುದಕ್ಕೂ ಎಂ.ಫಿಲ್, ಪಿಎಚ್.ಡಿ ಅಥವಾ ಡಿ.ಲಿಟ್ನ ಭಾಗವಾಗಿ ಸಂಶೋಧನಾ ಪ್ರಬಂಧವೊಂದನ್ನು ರಚಿಸುವುದಕ್ಕೂ ಬಹಳ ವ್ಯತ್ಯಾಸಗಳಿವೆ. ಈ ಪರಿಕಲ್ಪನಾತ್ಮಕ ವ್ಯತ್ಯಾಸವನ್ನು ಅದರ ಎಲ್ಲಾ ಸಂಕೀರ್ಣತೆಗಳೊಂದಿಗೆ ಕನ್ನಡದಲ್ಲೇ ವಿವರಿಸಲು ಚಂದ್ರಪೂಜಾರಿ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.<br /> <br /> ಅವರ ಕೆಲಸ ಕೇವಲ ಪರಿಕಲ್ಪನೆಯನ್ನು ವಿವರಿಸುವುದಕ್ಕಷ್ಟೇ ಸೀಮಿತವಾಗಿಲ್ಲ ಎಂಬುದು ಇಲ್ಲಿ ಬಹಳ ಮುಖ್ಯ. ಸಂಶೋಧನೆಯೆಂದರೆ ಕೇವಲ ಒಂದು ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟಿನೊಳಗೆ ನಿರ್ದಿಷ್ಟ ವಿಧಾನದ ಮೂಲಕ ನಿರ್ದಿಷ್ಟ ಸಮಸ್ಯೆಯೊಂದನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಷ್ಟೇ ಆಗಿ ಉಳಿಯುವುದಿಲ್ಲ. <br /> <br /> ಏಕೆಂದರೆ ಇಲ್ಲಿ ಆರಿಸಿಕೊಳ್ಳುವ ಸಮಸ್ಯೆ, ಅದನ್ನು ಗ್ರಹಿಸಲು ಬಳಸುವ ಸೈದ್ಧಾಂತಿಕ ಚೌಕಟ್ಟು ಮತ್ತು ವಿಶ್ಲೇಷಣೆಗೆ ಬಳಕೆಯಾಗುವ ವಿಧಾನಗಳು ಒಟ್ಟು ಸಾಮಾಜಿಕ, ರಾಜಕೀಯ ಒಲವುಗಳಿಂದ ಮುಕ್ತವಾಗಿರುವ ನಿರಪೇಕ್ಷ ಸಂಗತಿಯಲ್ಲ.<br /> <br /> ಆದ್ದರಿಂದ ಸಂಶೋಧನೆಯೆಂದರೆ ಒಂದು ರಾಜಕೀಯ ನಿಲುವಿನ ನಿರೂಪಣೆಯೂ ಆಗಬಹುದು. ಇಂಥದ್ದೊಂದು ಸಂದರ್ಭದಲ್ಲಿ ಸಂಶೋಧಕನ ಆಯ್ಕೆ ಯಾವುದು? ಈ ಬಹಳ ಸಂಕೀರ್ಣವಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ದಿಕ್ಕಿನಲ್ಲಿ ಚಂದ್ರಪೂಜಾರಿಯವರ ಕೃತಿ ಬಹಳ ಮಹತ್ವದ್ದಾಗಿದೆ.<br /> <br /> ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವನ್ನು `ಸಮಸ್ಯೀಕರಿಸುವ~ ಕುರಿತಂತೆ ಚರ್ಚಿಸುವ ಅಧ್ಯಾಯದಲ್ಲಿ ಚಂದ್ರ ಪೂಜಾರಿಯವರು ಆಯ್ದುಕೊಂಡಿರುವ ಉದಾಹರಣೆಗಳು ಅವರ ಚಿಂತನೆಯ ದಿಕ್ಕನ್ನು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ ಆಯ್ಕೆಯನ್ನು ಸೂಚಿಸುತ್ತವೆ. <br /> <br /> ಪ್ರತ್ಯೇಕ ಕೊಡಗಿನ ಬೇಡಿಕೆಯ ಉದಾಹರಣೆಯನ್ನು ತೆಗೆದುಕೊಂಡು ಅದನ್ನು ಸಮಸ್ಯೀಕರಿಸಲು ಯತ್ನಿಸುವ ಲೇಖಕರು `ಕೊಡಗರು ಮಾತ್ರ ಕೊಡಗಿನ ಮೂಲನಿವಾಸಿಗಳೇ? ಇತರ ಜಾತಿ ಜನರು ಅಲ್ಲಿನ ಮೂಲ ನಿವಾಸಿಗಳಲ್ಲವೇ? ತಾವು ಮಾತ್ರ ಅಲ್ಲಿನ ಮೂಲ ನಿವಾಸಿಗಳೆಂದು ಕೊಡವರು ಘೋಷಣೆ ಮಾಡಿ ಕೊಡಗಿನ ಪ್ರತ್ಯೇಕತೆಯನ್ನು ಬಯಸಿದರೆ ಉಳಿದ ಸಮುದಾಯಗಳ ಸ್ಥಿತಿ ಏನಾಗುತ್ತದೆ?~ ಎಂಬ ಪ್ರಶ್ನೆಗಳಿಗೆ ತಲುಪುತ್ತಾರೆ.<br /> <br /> ಈ ಪ್ರಶ್ನೆಗಳಿಗೆ ತಲುಪುವ ಹಾದಿಯಲ್ಲಿ ವಿವರಿಸಲಾಗಿರುವ `ಕಲ್ಪಿತ ಸತ್ಯ~, `ರಚಿತ ಸತ್ಯ~ ಎಂಬ ಪರಿಕಲ್ಪನೆಗಳು ಹೇಗೆ ಸಮಸ್ಯೀಕರಣವನ್ನು ಪ್ರಭಾವಿಸಬಹುದು ಎಂಬುದರ ಕುರಿತು ಚರ್ಚೆಯ ಅಗತ್ಯವಿತ್ತು ಎನಿಸುತ್ತದೆ.<br /> <br /> ವಿಷಯಗಳನ್ನು ಮಂಡಿಸುವ ಕ್ರಮ ಮತ್ತು ವಿಧಾನವೂ ಒಂದು ಸಂವಾದದ ಸ್ವರೂಪದಲ್ಲಿದೆ. ಪ್ರಶ್ನೆಗಳನ್ನು ಎತ್ತುತ್ತಾ ಅದಕ್ಕೆ ಉತ್ತರಗಳನ್ನು ಹುಡುಕುತ್ತಾ ಸಾಗುವ ಈ ಕ್ರಿಯೆ ಆಸಕ್ತ ಸಾಮಾನ್ಯ ಓದುಗನಿಗೂ ಅಪ್ಯಾಯಮಾನವಾಗುತ್ತದೆ. ಪರಿಣಾಮವಾಗಿ ಅತ್ಯಂತ ತಾಂತ್ರಿಕ ಎನಿಸಬಹುದಾದ ವಿವರಗಳೂ ಕೂಡಾ ಸರಳವಾಗಿ ಓದುಗನ ಮನಸ್ಸಿನೊಳಕ್ಕೆ ಇಳಿಯುತ್ತವೆ. <br /> <br /> ಅಷ್ಟೇಕೆ ಯಾವುದಾದರೂ ನಿರ್ದಿಷ್ಟ ಪರಿಕಲ್ಪನೆಯೊಂದರ ಕುರಿತ ಉಲ್ಲೇಖವಿದ್ದರೆ ಅದರ ಕುರಿತ ಹೆಚ್ಚಿನ ಮಾಹಿತಿಗೆ ಅಗತ್ಯವಿರುವ ಪುಸ್ತಕ ಅಥವಾ ಸಂಪ್ರಬಂಧದ ವಿವರಗಳೂ ಆಯಾ ಅಧ್ಯಾಯಗಳ ಕೊನೆಯಲ್ಲಿಯೇ ಇವೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>