ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ

Last Updated 8 ಜೂನ್ 2013, 19:59 IST
ಅಕ್ಷರ ಗಾತ್ರ

ಅಗ್ರಹಾರದ ಹುಡುಗಿ ಬಟ್ಟಲು ಪೂಜೆ
 

ಕಣ್ಣಿಗೆ ಕಣ್ಣ ಬೆಸೆದರೆ ಸಾಕು
ಬೊಗಸೆ ಬೊಗಸೆ ಮೊಗೆದು ಮೊಗೆದು
ಸುರತ ಕಡಲನೆ ಕುಡಿಸುವಳು
ನೋಡು ನೋಡುತ

ಮೆಲ್ಲ ಮೆಲ್ಲಗೆ ಕಿಸಿದು ಕಿಸಿದು
ಮುಲ್ಲೆಯರಳಿಸಿ
ತುಟಿ ತುಂಬಿ ಸವರುವಳು ಅಂಗಾತು

ಹುಡುಕುತ್ತಾನೆ ಅಮಲಲಿ
ಬಟಾ ಬಯಲ ತುಂಬ ಅವಳ ಅಂಡಲೆಗಳ
ತುಂಬು ಹೊಳೆ ನೀರ ಬಿಂದಿಗೆಗಳ
ಬಾಯಾರಿ ಬಾಯಾರಿ ಬಂದು ಹೋಗಿ

ಮುಗಿಲಿಗೆ ಮುಖ ಮಾಡಿದ
ಹುಲ್ಲು ಎಸಳುಗಳ ಮೇಲೆ ಸುರಿವ ಯೋನಿ ಪರಿಮಳ
ಇನ್ನೂ ಇಬ್ಬನಿಯ ಮಬ್ಬು ಮಬ್ಬು
ತೊಡೆ ಕಣಿವೆ ನುಣುಪಲಿ ತೆವಳುತ ಅಲೆಯುತ್ತಾನೆ
ಮೇವಿಗೆ ಹಸಿದಸಿದು
ಆಕಾಶ ಅಂತರಿಕ್ಷದಲಿ ನಿಗುರಿ ನಿಂತು
ನೆಗೆದೂ ನೆಗೆದೂ ಹಿಂಬಾಲಿಸುತ್ತಾನೆ
ಹಾದಿ ಬೀದಿಯಲಿ ಜೋಗಿ ಜಂಗಮ
ಪಾದ ಊರಿದ್ದ ಕಡೆ ಮಣ್ಣ ಹೂಗಳ ಆಯುತ್ತ

ಮಗ್ಗಲು ತುಂಬ ಹೊದ್ದು ಮಲಗುತ್ತಾನೆ
ಅವಳದೆ ಚಿತ್ರಗಳ ಹರಡಿಕೊಂಡು
ನಗ್ನ ಮೊಣಕಾಲ ರೋಮ ಪ್ರೇಮದಲಿ ವಾಲಾಡಿ
ಉತ್ಮತ್ತ ಬೆರಳುಗಳು ತಾಗಿ ತಾಗಿ
ಗಂಧ ಗಾಳಿಗೆ ತೋಳು ತೆನೆ ತೂಗಿ ಬಾಗಿ
ಜಡಿ ಮಳೆ ಧ್ಯಾನದಲಿ ಮೋಡಗಟ್ಟಿತು ತೀಡಿ

ತಣಿಯಲಾರದ ಅವಳು
ಸಾಕ್ಷಾತ್ ಸುರತ ಕಡಲ ಹಾಯಲು ಕಯ್ಯ ನಿಡಿದು
ಹುಲ್ಲು ಎಸಳುಗಳ ತೋರುತ ಕೂಗಿ ಕರೆದಳು

ಇಷ್ಟಲಿಂಗವ ಧರಿಸಿ ಬಟ್ಟಲು ಪೂಜೆಯ ಕೊಟ್ಟು
ಕಣಿವೆಯಲಿ ಮೇವಿಗಲೆವ ದೇವರ ಬಸವನ
ಕೂಡಿ ಹಾಡುವಳು
ಅಗ್ರಹಾರದೊಳು ಬೆಳಗಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT