<p> ಅಕ್ಟೋಬರದ ಮಧ್ಯಾಹ್ನ ಊಟ ಮುಗಿಸಿ, ಮಲಗಿ, ಎದ್ದ <br /> ರುಕ್ಮಿಣಿ ತಪ್ತ ದ್ವಾರಕೆಯಲ್ಲಿ ಮಂಜು ಮುಸುಕಿದ ಮಥುರೆಯನ್ನು <br /> ಉತ್ತರೀಯದಿಂದ ಗಾಳಿ ಹಾಕಿ ನೆನೆಯುತ್ತ<br /> ಸವತಿಯನ್ನು ಹರಟೆಗೆ ಕರೆದಳು</p>.<p>‘ಬಾರೆ ಭಾಮೆ’ ‘ಬಂದೆ’ ‘ಏನಾಗಿದೆ ನಿನಗೆ’ ‘ಏನಾಗಿದೆ ನನಗೆ’<br /> ‘ಕನ್ನಡಿಯಲಿ ಮುಖ ನೋಡು ಒಮ್ಮೆ’ ‘ನಾನಿರುವುದೆ ಹೀಗೆ’ <br /> ‘ಬಾಡಿ ಹೋಗಿದೆ ಮುಖ ಮುಡಿದ ಪಾರಿಜಾತದ ಹಾಗೆ’ <br /> ‘ಬಹುಶಃ ಆಶ್ವೀಜದ ಬೇಗೆ’</p>.<p>‘ಅಲ್ಲಕ್ಕ, ಈ ರಾಧೆಗೇನಾಯ್ತು? ಎಲ್ಲಿ ಹೋದಳು ಆಕೆ?’<br /> ‘ಇರಬಹುದು ಮಥುರೆಯಲಿ ಮೊಮ್ಮಕ್ಕಳ ಅಂಡು ತೊಳೆಯುತ್ತ,<br /> ರೇಷನ್ ತರಲು ಹೋದ ಗಂಡನ ದಾರಿ ಕಾಯುತ್ತ, <br /> ಕೃಷ್ಣನೊಡನಾಡಿದ ಪ್ರಣಯದಾಟಗಳನ್ನು ನೆನೆಯುತ್ತ,<br /> ಕಳೆದ ಸುಖದಿನಗಳ ನೆನಪಿನಲೆ ರೋಮಾಂಚಿಸುತ್ತ’</p>.<p>‘ನಿನ್ನ ತೋಳಲ್ಲಿ ಇದ್ದಾಗ ಅವಳ ನೆನಪು?’ ‘ಆಗಾಗ’ <br /> ‘ಆತ ನನ್ನೊಡನಿದ್ದಾಗಲೆಲ್ಲ ಅವಳ ಜೊತೆಯೇ ಇದ್ದೇನೆ<br /> ಎಂದು ತಿಳಿಯುತ್ತಾನೆ ಅನ್ನುವುದು ನನ್ನ ಚಿಂತೆ’ <br /> ‘ಇಂಥ ಹುಚ್ಚು ನಿನಗೂ ಬಂತೆ?’ ‘ನಿನಗಿಲ್ಲವೆ?’</p>.<p>‘ಹೇ ಸಖಿ, ಮೊದಮೊದಲು ನನಗೂ ಹಾಗೆಯೇ ಅನ್ನಿಸುತ್ತಿತ್ತು.<br /> ಆದರೆ ಕೃಷ್ಣನ ರೀತಿಯೇ ಹಾಗೆ<br /> ಯಮುನೆಯ ನೀರಿನ ಹಾಗೆ <br /> ಗಂಗೆಯ ರಭಸ ಅದಕಿಲ್ಲ ನಿಜ. ಮೂರು ನಿಮಿಷ<br /> ನೂರು ನಿಮಿಷಗಳ ಹಾಗೆ’</p>.<p>‘ಹೇ ರುಕ್ಮಿಣಿ, ನೀನು ಪಟ್ಟದ ರಾಣಿ, <br /> ಕೃಷ್ಣನ ಕಣ್ಮಣಿ, ನಡೆಯುತ್ತದೆ ನಿನ್ನ ವಾಣಿ, <br /> ನನ್ನದು ಹಾಗಲ್ಲ, ಕೃಷ್ಣನಿಗೆ ನಾನು ಬೇಕಿಲ್ಲ’<br /> ‘ನೋಡೆ ಗೆಳತಿ, ಕೃಷ್ಣ ಮುಳುಗಿದ್ದಾನೆ ಈಗ <br /> ರಾಜಕಾರಣದಲ್ಲಿ, ಮಹಾಭಾರತದ ಹೂರಣದಲ್ಲಿ <br /> ಹಸ್ತಿನಾವತಿಗಿಂದು ಹೋಗಿದ್ದಾನೆ’ ‘ಹೌದು ಕೇಳಿದ್ದೇನೆ-<br /> ಹೋಗಿರಬಹುದು ದ್ರೌಪದಿಗೆ ಸೀರೆ ಕೊಡಲು, <br /> ಪಾಂಡವರಿಗೆ ಮನೆ ಕೊಡಲು<br /> ಹೋಗಬಹುದು ಅವನ ಸವಾರಿ, ಇದೆ ಮಥುರೆ ಹತ್ತಿರದಲ್ಲಿ’</p>.<p>‘ಆದರೆ ನೋಡೆ, ಬಂದಿದ್ದ ಕೃಷ್ಣ ನನ್ನೆಡೆಗೆ ಮೊನ್ನೆಯ ಇರುಳು’<br /> ‘ಬಂದಾಯ್ತು ಅವನು ನನ್ನಲ್ಲಿಗೆ ಆರು ತಿಂಗಳು’<br /> ‘ಮನೆಯಲ್ಲಿ ಉಪ್ಪು ಹುಳಿ ಖಾರ ಸಿಹಿ ಒಂದೂ ಇರಲಿಲ್ಲ’<br /> ‘ಮನದೊಳಗೆ ಕೂಡ ಅವು ಇಲ್ಲವಲ್ಲ’<br /> ‘ತೆರೆದಿತ್ತೆ ನನ್ನ ಅಕ್ಷಯ ಪಾತ್ರೆಯನು’<br /> ‘ಜಾಗ್ರತೆ, ಹೋಗಿ ಕೊಟ್ಟಾನು ಬೇರೆಯವರಿಗದನು’<br /> ‘ಆ ತನಕದ ವಿರಹ ವಿರಸ ಕೋಪ ತಾಪ <br /> ಕರಗಿ ನೀರಾಯಿತು ನೋಡು’<br /> ‘ನನಗೆ ಶಿವ ಬರೆದಿಲ್ಲ ಅಂಥ ಸುಖ<br /> ಏನು ಹೇಳಲಿ ಬಿಡು’<br /> ‘ನಗು ನಗುತ ಹೊರಟ ಮತ್ತೆ ಬರುವೆನು ಹೇಳಿ<br /> ಮನದೊಳಗೆ ಧನ್ಯತೆಯ ಧೂಪ ದೀಪಾವಳಿ’</p>.<p>‘ಯಾಕೆ ಸುಮ್ಮನೆ ಕುಳಿತೆ? ಕಣ್ಣಲ್ಲೇಕೆ ನೀರು?<br /> ತಂಗಿ, <br /> ಪ್ರೀತಿ ಎಂದರೆ ಏನು ಬೆಣ್ಣೆಯೇ ಪಾಲು ಮಾಡಲು?<br /> ಪ್ರೀತಿಯಲಿ ಅಪೇಕ್ಷೆಯಿಲ್ಲ ಅಪೇಕ್ಷೆಯ ಪ್ರೀತಿ ಪ್ರೀತಿಯಲ್ಲ.<br /> ಮಾಡಿಕೊಳ್ಳಲಿ ಬಿಡು ಅವನು <br /> ಹದಿನೈದು ಸಾವಿರದ ಒಂಭೈನೂರ ತೊಂಭತ್ತೆಂಟು<br /> ಮುಳುಗಿ ಹೋಗುವುದೇನು ನಮ್ಮ ಗಂಟು?<br /> ಕಾಯಬೇಕು ಮುದ್ದು ತಂಗಿ, ಒಳ್ಳೆಯ ಗಂಡ ಸಿಗಲು<br /> ಸಿಕ್ಕ ಗಂಡನ ಸುಖ ಸಿಗಲು, ಹಾಗೊಮ್ಮೆ ಸಿಕ್ಕಿದರೆ ಅದು<br /> ಮೊಗೆದಷ್ಟೂ ಮುಗಿಯದ ಧಾರೆ, ನಿನ್ನ<br /> ಪಾತ್ರೆ ನೀನು ತುಂಬಿಸುವ ಹುನ್ನಾರ ಬೆಳೆಸಿ ಕೋ’. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಅಕ್ಟೋಬರದ ಮಧ್ಯಾಹ್ನ ಊಟ ಮುಗಿಸಿ, ಮಲಗಿ, ಎದ್ದ <br /> ರುಕ್ಮಿಣಿ ತಪ್ತ ದ್ವಾರಕೆಯಲ್ಲಿ ಮಂಜು ಮುಸುಕಿದ ಮಥುರೆಯನ್ನು <br /> ಉತ್ತರೀಯದಿಂದ ಗಾಳಿ ಹಾಕಿ ನೆನೆಯುತ್ತ<br /> ಸವತಿಯನ್ನು ಹರಟೆಗೆ ಕರೆದಳು</p>.<p>‘ಬಾರೆ ಭಾಮೆ’ ‘ಬಂದೆ’ ‘ಏನಾಗಿದೆ ನಿನಗೆ’ ‘ಏನಾಗಿದೆ ನನಗೆ’<br /> ‘ಕನ್ನಡಿಯಲಿ ಮುಖ ನೋಡು ಒಮ್ಮೆ’ ‘ನಾನಿರುವುದೆ ಹೀಗೆ’ <br /> ‘ಬಾಡಿ ಹೋಗಿದೆ ಮುಖ ಮುಡಿದ ಪಾರಿಜಾತದ ಹಾಗೆ’ <br /> ‘ಬಹುಶಃ ಆಶ್ವೀಜದ ಬೇಗೆ’</p>.<p>‘ಅಲ್ಲಕ್ಕ, ಈ ರಾಧೆಗೇನಾಯ್ತು? ಎಲ್ಲಿ ಹೋದಳು ಆಕೆ?’<br /> ‘ಇರಬಹುದು ಮಥುರೆಯಲಿ ಮೊಮ್ಮಕ್ಕಳ ಅಂಡು ತೊಳೆಯುತ್ತ,<br /> ರೇಷನ್ ತರಲು ಹೋದ ಗಂಡನ ದಾರಿ ಕಾಯುತ್ತ, <br /> ಕೃಷ್ಣನೊಡನಾಡಿದ ಪ್ರಣಯದಾಟಗಳನ್ನು ನೆನೆಯುತ್ತ,<br /> ಕಳೆದ ಸುಖದಿನಗಳ ನೆನಪಿನಲೆ ರೋಮಾಂಚಿಸುತ್ತ’</p>.<p>‘ನಿನ್ನ ತೋಳಲ್ಲಿ ಇದ್ದಾಗ ಅವಳ ನೆನಪು?’ ‘ಆಗಾಗ’ <br /> ‘ಆತ ನನ್ನೊಡನಿದ್ದಾಗಲೆಲ್ಲ ಅವಳ ಜೊತೆಯೇ ಇದ್ದೇನೆ<br /> ಎಂದು ತಿಳಿಯುತ್ತಾನೆ ಅನ್ನುವುದು ನನ್ನ ಚಿಂತೆ’ <br /> ‘ಇಂಥ ಹುಚ್ಚು ನಿನಗೂ ಬಂತೆ?’ ‘ನಿನಗಿಲ್ಲವೆ?’</p>.<p>‘ಹೇ ಸಖಿ, ಮೊದಮೊದಲು ನನಗೂ ಹಾಗೆಯೇ ಅನ್ನಿಸುತ್ತಿತ್ತು.<br /> ಆದರೆ ಕೃಷ್ಣನ ರೀತಿಯೇ ಹಾಗೆ<br /> ಯಮುನೆಯ ನೀರಿನ ಹಾಗೆ <br /> ಗಂಗೆಯ ರಭಸ ಅದಕಿಲ್ಲ ನಿಜ. ಮೂರು ನಿಮಿಷ<br /> ನೂರು ನಿಮಿಷಗಳ ಹಾಗೆ’</p>.<p>‘ಹೇ ರುಕ್ಮಿಣಿ, ನೀನು ಪಟ್ಟದ ರಾಣಿ, <br /> ಕೃಷ್ಣನ ಕಣ್ಮಣಿ, ನಡೆಯುತ್ತದೆ ನಿನ್ನ ವಾಣಿ, <br /> ನನ್ನದು ಹಾಗಲ್ಲ, ಕೃಷ್ಣನಿಗೆ ನಾನು ಬೇಕಿಲ್ಲ’<br /> ‘ನೋಡೆ ಗೆಳತಿ, ಕೃಷ್ಣ ಮುಳುಗಿದ್ದಾನೆ ಈಗ <br /> ರಾಜಕಾರಣದಲ್ಲಿ, ಮಹಾಭಾರತದ ಹೂರಣದಲ್ಲಿ <br /> ಹಸ್ತಿನಾವತಿಗಿಂದು ಹೋಗಿದ್ದಾನೆ’ ‘ಹೌದು ಕೇಳಿದ್ದೇನೆ-<br /> ಹೋಗಿರಬಹುದು ದ್ರೌಪದಿಗೆ ಸೀರೆ ಕೊಡಲು, <br /> ಪಾಂಡವರಿಗೆ ಮನೆ ಕೊಡಲು<br /> ಹೋಗಬಹುದು ಅವನ ಸವಾರಿ, ಇದೆ ಮಥುರೆ ಹತ್ತಿರದಲ್ಲಿ’</p>.<p>‘ಆದರೆ ನೋಡೆ, ಬಂದಿದ್ದ ಕೃಷ್ಣ ನನ್ನೆಡೆಗೆ ಮೊನ್ನೆಯ ಇರುಳು’<br /> ‘ಬಂದಾಯ್ತು ಅವನು ನನ್ನಲ್ಲಿಗೆ ಆರು ತಿಂಗಳು’<br /> ‘ಮನೆಯಲ್ಲಿ ಉಪ್ಪು ಹುಳಿ ಖಾರ ಸಿಹಿ ಒಂದೂ ಇರಲಿಲ್ಲ’<br /> ‘ಮನದೊಳಗೆ ಕೂಡ ಅವು ಇಲ್ಲವಲ್ಲ’<br /> ‘ತೆರೆದಿತ್ತೆ ನನ್ನ ಅಕ್ಷಯ ಪಾತ್ರೆಯನು’<br /> ‘ಜಾಗ್ರತೆ, ಹೋಗಿ ಕೊಟ್ಟಾನು ಬೇರೆಯವರಿಗದನು’<br /> ‘ಆ ತನಕದ ವಿರಹ ವಿರಸ ಕೋಪ ತಾಪ <br /> ಕರಗಿ ನೀರಾಯಿತು ನೋಡು’<br /> ‘ನನಗೆ ಶಿವ ಬರೆದಿಲ್ಲ ಅಂಥ ಸುಖ<br /> ಏನು ಹೇಳಲಿ ಬಿಡು’<br /> ‘ನಗು ನಗುತ ಹೊರಟ ಮತ್ತೆ ಬರುವೆನು ಹೇಳಿ<br /> ಮನದೊಳಗೆ ಧನ್ಯತೆಯ ಧೂಪ ದೀಪಾವಳಿ’</p>.<p>‘ಯಾಕೆ ಸುಮ್ಮನೆ ಕುಳಿತೆ? ಕಣ್ಣಲ್ಲೇಕೆ ನೀರು?<br /> ತಂಗಿ, <br /> ಪ್ರೀತಿ ಎಂದರೆ ಏನು ಬೆಣ್ಣೆಯೇ ಪಾಲು ಮಾಡಲು?<br /> ಪ್ರೀತಿಯಲಿ ಅಪೇಕ್ಷೆಯಿಲ್ಲ ಅಪೇಕ್ಷೆಯ ಪ್ರೀತಿ ಪ್ರೀತಿಯಲ್ಲ.<br /> ಮಾಡಿಕೊಳ್ಳಲಿ ಬಿಡು ಅವನು <br /> ಹದಿನೈದು ಸಾವಿರದ ಒಂಭೈನೂರ ತೊಂಭತ್ತೆಂಟು<br /> ಮುಳುಗಿ ಹೋಗುವುದೇನು ನಮ್ಮ ಗಂಟು?<br /> ಕಾಯಬೇಕು ಮುದ್ದು ತಂಗಿ, ಒಳ್ಳೆಯ ಗಂಡ ಸಿಗಲು<br /> ಸಿಕ್ಕ ಗಂಡನ ಸುಖ ಸಿಗಲು, ಹಾಗೊಮ್ಮೆ ಸಿಕ್ಕಿದರೆ ಅದು<br /> ಮೊಗೆದಷ್ಟೂ ಮುಗಿಯದ ಧಾರೆ, ನಿನ್ನ<br /> ಪಾತ್ರೆ ನೀನು ತುಂಬಿಸುವ ಹುನ್ನಾರ ಬೆಳೆಸಿ ಕೋ’. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>