ಸ್ಕೂಲಿಗೆ ಸೇರುವ ಸರದಿ
ಜನ್ಮಕುಂಡಲಿ ಕೇಳಿದ ಮೇಷ್ಟ್ರಿಗೆ
ಹೆ...ಹ್ಹೆ...ಹ್ಹೆ... ನಗೆಯ ಬೀರಿದ ಅಪ್ಪ
ಬಾಲದ ಬರಚುಕ್ಕಿ ಕಾಣಿಸಿ
ಬರ್ಗಾಲ ಬಂದು, ಬಿದ್ರಕ್ಕಿ ತಿಂದ್ವು ನೋಡಿ
ಅದರ ಹಿಂದ್ಕೆ ಕದಾಳು ಕ್ಯರೆ
ಬ್ಯಾಟೆ ಆತು ನೋಡಿ
ಅದೇ... ಬಯಲೊಳೆ ಬಿದ್ದು
ಸಂಪೂರ್ಣ ರಾಮಾಯಣ ಆದ ವರ್ಷ
ನಮ್ಮ ದೊಡ್ಡಸ ಕರ ಹಾಕಿದ
ದಿನವೇ ಹುಟ್ಟಿದ್ದು.