ಈ ಹಿನ್ನೀರು ಬಯಲು ಒಡೆಯ
ನನ್ನಜ್ಜ ಕೆಂಪಯ್ಯ
ಕೂಡು ಕುಟುಂಬ ಕೂಡಿ
ಹೀರೆ, ಹಾಗಲ, ಪಡುವಲ
ತೊಂಡೆ-ಬೆಂಡೆ, ದಂಡು-ದಿಂಡಿ ಬೆಳೆದು
ಬಲ ಪಕ್ಕೆ ಹಾಸನಕ್ಕೆ
ಜೋಡೆತ್ತು ಗಾಡಿ ಸಾಗಿಸಿ
ಕಾಂಚಾಣ ಕೂಡಿ
ಸೀಮೆಗೆ ಪಂಪ್ಸೆಟ್ಟಿಟ್ಟಿ
ಬೆಳೆಮೇಲೆ ಬೆಳೆ ಬೆಳೆದು
ಗಗನಚುಂಬಿ ಅಡಿಕೆ
ತೆಂಗು ಬಾಳೆ ತೋಟ ಮಾಡಿ
ಶ್ವೇತಧಾರಿ ಗರಿಗೆದರು ನವಿಲಾಗಿ
ನೊರನೊರ ಜೋಡುಮೆಟ್ಟಿ
ಫ್ರೀಡಮ್ ಫೈಟಿಗೆ ಧುಮುಕಿ
ಜೈಲು ಸೇರಿದ ನೀನು, ಪದ್ಮಾಸನ ಹಾಕಿ
ಸ್ವಾಮಿದೇವನೆ ಲೋಕಪಾಲನೆ ಪಾಡಿ
ಬೆವರು ಬರಿಸಿದ್ದೆಯಂತೆ ಜೈಲಿಗನಿಗೆ