<p>ಪ್ರಾಚೀನತೆಯೇ ಶ್ರೇಷ್ಠತೆಯ ಮಾನದಂಡ ಅಲ್ಲ. ಆದರೂ ಆ ಬಗ್ಗೆ ಅನೇಕರಿಗೆ ಅದರ ಒಲವು ಅತಿಯಾಗಿ ಕಾಡುತ್ತದೆ. ನಟ ಕಮಲ್ಹಾಸನ್ ಅವರ ‘ತಮಿಳಿನಿಂದ ಕನ್ನಡ ಹುಟ್ಟಿತು’ ಎನ್ನುವ ಹೇಳಿಕೆ ವಿವಾದ ಅಲೆಯನ್ನೇ ಎಬ್ಬಿಸಿತ್ತು. ಆ ಹೇಳಿಕೆಗೆ ಲೇಖಕ ರಾ.ನಂ. ಚಂದಶೇಖರ ಪ್ರತಿಕ್ರಿಯಾತ್ಮಕ ಎನ್ನುವಂತೆ ‘ಕನ್ನಡ ಮೊದಲೋ ತಮಿಳು ಮೊದಲೋ’, ‘ಕನ್ನಡಕ್ಕೆ ಆಗುತ್ತಿರುವ ಅವಮಾನಕ್ಕೆ ಕೊನೆ ಎಂದು?’, ‘ಮಾನವರು ಮಾತನಾಡಿದ ಮೊದಲ ಭಾಷೆ ತಮಿಳು’ ಎನ್ನುವ ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳ ಜೊತೆ ‘ಕನ್ನಡನಾಡು–ನುಡಿಗೆ ಸಂಬಂಧಿಸಿದ ವರದಿಗಳು’, ‘ಹೊರನಾಡ ಕನ್ನಡ ಸಂಘಟನೆಗಳು’, ‘ಚಿರಂಜೀವಿಯಾಗಿರುವ ಕನ್ನಡ ನಾಡು–ನಡಿ: ಸಮಸ್ಯೆಗಳು’, ‘ಭಾಷಾವಾರು ರಾಜ್ಯಗಳಿಗೆ–70: ಏಳುಬೀಳುಗಳ ಹಿನ್ನೋಟ’ ಹೀಗೆ ಭಾಷೆ, ನೆಲ ಮತ್ತು ಜಲಕ್ಕೆ ಸಂಬಂಧಿಸಿದ ವಿಶ್ಲೇಷಣಾತ್ಮಕ 15 ಲೇಖನಗಳನ್ನು ಸಂಗ್ರಹಿಸಿ ‘ಕನ್ನಡ ಮೊದಲೋ ತಮಿಳು ಮೊದಲೋ’ ಕೃತಿಯಲ್ಲಿ ನೀಡಿದ್ದಾರೆ.</p>.<p>ಸಂಶೋಧಕ ಶಂ.ಬಾ. ಜೋಷಿ ಅವರ ‘ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ ಕೃತಿಯನ್ನು ಆಧರಿಸಿದ ಲೇಖನವೂ ಇದೆ. ಅದರಲ್ಲಿ ನಾಡು, ಜನಾಂಗ, ಐತಿಹ್ಯ, ಪೌರಾಣಿಕ ನಂಬಿಕೆಯೂ ವಿವರ ಬರುತ್ತದೆ. ಕನ್ನಡನಾಡಿನ ವಿಸ್ತಾರ ‘ಕಾವೇರಿಯಿಂದ ಗಂಗೆಯವರೆಗೂ ಹಬ್ಬಿತ್ತು’ ಎನ್ನುವ ವಿವರವನ್ನು ನಿಡುತ್ತಾರೆ.</p>.<p>ಕನ್ನಡ ಭಾಷೆ ಮತ್ತು ನೆಲದ ಅಭ್ಯುದಯಕ್ಕೆ ಸಂಬಂಧಿಸಿದಂತೆ ರಚನೆಯಾದ ವರದಿಗಳ ವಿವರವನ್ನು ‘ಕನ್ನಡನಾಡು–ನುಡಿಗೆ ಸಂಬಂಧಿಸಿದ ವರದಿಗಳು’ ಲೇಖನ ನೀಡುತ್ತದೆ. ಭಾಷಾವಾರು ರಾಜ್ಯದ ಒತ್ತಾಸೆಯ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣ ಆಗಿದೆ. ಗಡಿ–ಜಲ ಹಂಚಿಕೆ, ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದಂತೆ ನಿರೂಪಿಸಿದ ‘ಮಹಾಜನ ವರದಿ’, ‘ಮಲ್ಲಾರಾಧ್ಯ ವರದಿ’, ‘ರಾಷ್ಟ್ರೀಯ ಶಿಕ್ಷಣ ಆಯೋಗ’, ‘ವಿ.ಕೃ. ಗೋಕಾಕ್ ಸಮಿತಿ ವರದಿ’, ‘ಎಚ್. ನರಸಿಂಹಯ್ಯ ವರದಿ’, ‘ಚಂಪಾ ವರದಿ’, ‘ಬರಗೂರು ವರದಿ’, ‘ಸರ್ಕಾರಿ ಶಾಲೆಗಳ ಸಬಲೀಕರಣ ವರದಿ’, ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಕ್ಕೆ ಸಂಬಂಧಿಸಿದ ‘ಹಿ.ಚಿ. ಬೋರಲಿಂಗಯ್ಯ ವರದಿ’, ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದ ‘ಸರೋಜಿನಿ ಮಹಿಷಿ ವರದಿ’ ಸೇರಿದಂತೆ ಬೇರೆ ಬೇರೆ ವರದಿಗಳನ್ನೂ ಒಳಗೊಂಡಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯ ಪೂರ್ವ ವರದಿಗಳ ಪ್ರಸ್ತಾಪವನ್ನೂ ಇಲ್ಲಿ ತಂದಿದ್ದಾರೆ. ಕನ್ನಡ ಲಿಪಿಯ ಉಗಮ ಮತ್ತು ದ್ರಾವಿಡ ಭಾಷಾ ವಂಶದ ವಿವರಣೆಯನ್ನು ಲೇಖಕರು ನೀಡಿದ್ದಾರೆ.</p>.<p>ಕನ್ನಡ ಮೊದಲೋ ತಮಿಳು ಮೊದಲೋ ಲೇ: ರಾ.ನಂ. ಚಂದ್ರಶೇಖರ ಪ್ರ: ಸಪ್ನ ಬುಕ್ ಹೌಸ್ ಸಂ: 080–40114455</p>
<p>ಪ್ರಾಚೀನತೆಯೇ ಶ್ರೇಷ್ಠತೆಯ ಮಾನದಂಡ ಅಲ್ಲ. ಆದರೂ ಆ ಬಗ್ಗೆ ಅನೇಕರಿಗೆ ಅದರ ಒಲವು ಅತಿಯಾಗಿ ಕಾಡುತ್ತದೆ. ನಟ ಕಮಲ್ಹಾಸನ್ ಅವರ ‘ತಮಿಳಿನಿಂದ ಕನ್ನಡ ಹುಟ್ಟಿತು’ ಎನ್ನುವ ಹೇಳಿಕೆ ವಿವಾದ ಅಲೆಯನ್ನೇ ಎಬ್ಬಿಸಿತ್ತು. ಆ ಹೇಳಿಕೆಗೆ ಲೇಖಕ ರಾ.ನಂ. ಚಂದಶೇಖರ ಪ್ರತಿಕ್ರಿಯಾತ್ಮಕ ಎನ್ನುವಂತೆ ‘ಕನ್ನಡ ಮೊದಲೋ ತಮಿಳು ಮೊದಲೋ’, ‘ಕನ್ನಡಕ್ಕೆ ಆಗುತ್ತಿರುವ ಅವಮಾನಕ್ಕೆ ಕೊನೆ ಎಂದು?’, ‘ಮಾನವರು ಮಾತನಾಡಿದ ಮೊದಲ ಭಾಷೆ ತಮಿಳು’ ಎನ್ನುವ ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳ ಜೊತೆ ‘ಕನ್ನಡನಾಡು–ನುಡಿಗೆ ಸಂಬಂಧಿಸಿದ ವರದಿಗಳು’, ‘ಹೊರನಾಡ ಕನ್ನಡ ಸಂಘಟನೆಗಳು’, ‘ಚಿರಂಜೀವಿಯಾಗಿರುವ ಕನ್ನಡ ನಾಡು–ನಡಿ: ಸಮಸ್ಯೆಗಳು’, ‘ಭಾಷಾವಾರು ರಾಜ್ಯಗಳಿಗೆ–70: ಏಳುಬೀಳುಗಳ ಹಿನ್ನೋಟ’ ಹೀಗೆ ಭಾಷೆ, ನೆಲ ಮತ್ತು ಜಲಕ್ಕೆ ಸಂಬಂಧಿಸಿದ ವಿಶ್ಲೇಷಣಾತ್ಮಕ 15 ಲೇಖನಗಳನ್ನು ಸಂಗ್ರಹಿಸಿ ‘ಕನ್ನಡ ಮೊದಲೋ ತಮಿಳು ಮೊದಲೋ’ ಕೃತಿಯಲ್ಲಿ ನೀಡಿದ್ದಾರೆ.</p>.<p>ಸಂಶೋಧಕ ಶಂ.ಬಾ. ಜೋಷಿ ಅವರ ‘ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ ಕೃತಿಯನ್ನು ಆಧರಿಸಿದ ಲೇಖನವೂ ಇದೆ. ಅದರಲ್ಲಿ ನಾಡು, ಜನಾಂಗ, ಐತಿಹ್ಯ, ಪೌರಾಣಿಕ ನಂಬಿಕೆಯೂ ವಿವರ ಬರುತ್ತದೆ. ಕನ್ನಡನಾಡಿನ ವಿಸ್ತಾರ ‘ಕಾವೇರಿಯಿಂದ ಗಂಗೆಯವರೆಗೂ ಹಬ್ಬಿತ್ತು’ ಎನ್ನುವ ವಿವರವನ್ನು ನಿಡುತ್ತಾರೆ.</p>.<p>ಕನ್ನಡ ಭಾಷೆ ಮತ್ತು ನೆಲದ ಅಭ್ಯುದಯಕ್ಕೆ ಸಂಬಂಧಿಸಿದಂತೆ ರಚನೆಯಾದ ವರದಿಗಳ ವಿವರವನ್ನು ‘ಕನ್ನಡನಾಡು–ನುಡಿಗೆ ಸಂಬಂಧಿಸಿದ ವರದಿಗಳು’ ಲೇಖನ ನೀಡುತ್ತದೆ. ಭಾಷಾವಾರು ರಾಜ್ಯದ ಒತ್ತಾಸೆಯ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣ ಆಗಿದೆ. ಗಡಿ–ಜಲ ಹಂಚಿಕೆ, ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದಂತೆ ನಿರೂಪಿಸಿದ ‘ಮಹಾಜನ ವರದಿ’, ‘ಮಲ್ಲಾರಾಧ್ಯ ವರದಿ’, ‘ರಾಷ್ಟ್ರೀಯ ಶಿಕ್ಷಣ ಆಯೋಗ’, ‘ವಿ.ಕೃ. ಗೋಕಾಕ್ ಸಮಿತಿ ವರದಿ’, ‘ಎಚ್. ನರಸಿಂಹಯ್ಯ ವರದಿ’, ‘ಚಂಪಾ ವರದಿ’, ‘ಬರಗೂರು ವರದಿ’, ‘ಸರ್ಕಾರಿ ಶಾಲೆಗಳ ಸಬಲೀಕರಣ ವರದಿ’, ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಕ್ಕೆ ಸಂಬಂಧಿಸಿದ ‘ಹಿ.ಚಿ. ಬೋರಲಿಂಗಯ್ಯ ವರದಿ’, ಕನ್ನಡಿಗರ ಉದ್ಯೋಗಕ್ಕೆ ಸಂಬಂಧಿಸಿದ ‘ಸರೋಜಿನಿ ಮಹಿಷಿ ವರದಿ’ ಸೇರಿದಂತೆ ಬೇರೆ ಬೇರೆ ವರದಿಗಳನ್ನೂ ಒಳಗೊಂಡಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯ ಪೂರ್ವ ವರದಿಗಳ ಪ್ರಸ್ತಾಪವನ್ನೂ ಇಲ್ಲಿ ತಂದಿದ್ದಾರೆ. ಕನ್ನಡ ಲಿಪಿಯ ಉಗಮ ಮತ್ತು ದ್ರಾವಿಡ ಭಾಷಾ ವಂಶದ ವಿವರಣೆಯನ್ನು ಲೇಖಕರು ನೀಡಿದ್ದಾರೆ.</p>.<p>ಕನ್ನಡ ಮೊದಲೋ ತಮಿಳು ಮೊದಲೋ ಲೇ: ರಾ.ನಂ. ಚಂದ್ರಶೇಖರ ಪ್ರ: ಸಪ್ನ ಬುಕ್ ಹೌಸ್ ಸಂ: 080–40114455</p>