ಇಲ್ಲಿ ಹಲವು ಕಥೆಗಳಲ್ಲಿ ಗಮನ ಸೆಳೆಯುವುದು ರಾಯಚೂರು– ಕೊಪ್ಪಳ ಸೀಮೆಯ ಭಾಷಾ ಸೊಗಡು. ಹಳ್ಳಿಯ ಸನ್ನಿವೇಶಗಳನ್ನು ಹೇಳುವಲ್ಲಿ ಪೂರ್ತಿ ಆಯಾ ಪ್ರಾದೇಶಿಕ ಸೊಗಡನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಿರೂಪಿಸಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಸೋಮಕ್ಕನ ಸ್ವಭಾವ (‘ದೇವರು ಕಣ್ಬಿಟ್ಟರೆ’ ಕಥೆ) ಮನುಷ್ಯ ಸಹಜ ವರ್ತನೆಯನ್ನು ತೆರೆದಿಟ್ಟಿದೆ. ಸಮಚಿತ್ತದ ಅಗತ್ಯವನ್ನೂ ಅಲ್ಲಲ್ಲಿ ಹೇಳಿದೆ.